Author Archives: sahayana

ಪೌರಕಾರ್ಮಿಕರ ಸಲುವಾಗಿ ನಮ್ಮ ಮೌನ ಮುರಿಯ ಬೇಕಾಗಿದೆ- ವಿಠ್ಠಲ ಭಂಡಾರಿ ಕೆರೆಕೋಣ

ಸಾಮಾನ್ಯ

           (23-05-2017 ರಂದು ಕಾರವಾರದಲ್ಲಿ ಗುತ್ತಿಗೆ ಪೌರಕಾರ್ಮಿಕರ ಹೋರಾಟ
ನಡೆಯುತ್ತಿದ್ದು ಅದಕ್ಕೆ ಪೂರಕವಾಗಿ ಈ ಲೇಖನ)

  “ಬೆಳಿಗ್ಗೆ 4.45ಕ್ಕೆ ಏಳುತ್ತೇನೆ. 5.30 ಕ್ಕೆ ಅಟೆಂಡೆನ್ಸ್ ಹಾಕಬೇಕು. ಅಷ್ಟರೊಳಗೆ ಮನೆಯಲ್ಲಿ ತಿಂಡಿ, ಅಡುಗೆ ಮಾಡಿಟ್ಟು ಹೋಗಬೇಕು. ಪುಟ್ಟ ಬಾಲೆ ಸೀರೆ ಸೆರಗಲ್ಲಿ ಮಲಗಿರ್ತಾಳೆ. ಅದನ್ನ ಬಿಡಿಸಿ ಪಕ್ಕಕ್ಕೆ ಮಲಗಿಸಿ ಬರುವಾಗ ಮನಸ್ಸಿಗೆಲ್ಲಾ ನೋವು. ಅವಳು ಎದ್ದಳೋ? ಹಾಲಿಗಾಗಿ ಅಳ್ತಿದ್ದಾಳೋ? ಹಸ್ದಿದ್ದಾಳೋ?….. ಇಂಥ ನೂರಾರು ಪ್ರಶ್ನೆಗಳು ಮನಸ್ಸಿನಲ್ಲಿ. ಬೆಳಿಗ್ಗೆ ಮನೆ ಬಿಟ್ರೆ ವಾಪಾಸಾಗೋದು 2 ಗಂಟೆಗೆ. ಇಷ್ಟರ ಮಧ್ಯೆ ಅಲ್ಲಿ ಕೈಯಲ್ಲಿ ಪೊರಕೆ ಹಿಡಿದು ಕತ್ತಲಲ್ಲೇ ಕಸ ಬಾಚಬೇಕು. ಅದು ಹೇಲೋ, ಸತ್ತ ಹೆಗ್ಗಣವೋ ಯಾವುದೂ ಗೊತ್ತಾಗುವುದಿಲ್ಲ. ಯಾರು ಎಲ್ಲಿ ಲ್ಯಾಟ್ರಿನ್ ಮಾಡಿರ್ತಾರೋ ಕತ್ತಲಲ್ಲಿ ಅದೂ ಗೊತ್ತಾಗೋದಿಲ್ಲಾ. ಅದನ್ನೆಲ್ಲಾ ಎಳಕೊಂಡು ತುಂಬ್ ಕೊಂಡ್ ಬರಬೇಕು. ಎಂತೆಂಥದ್ದೋ ಕಸ….. ಹೇಲು, ಹೆಗ್ಗಣ, ಕೊಳೆತ ತರಕಾರಿ, ನಿರೋಧದ ಪ್ಯಾಕೆಟ್, ವಿಶ್ಪರ್ ಪ್ಯಾಡ್….. ಎಲ್ಲಾ ಕಯ್ಯಲ್ಲೇ ಬಾಚಬೇಕಾಗಿತ್ತು. ನಮಗೆ ಗ್ಲೌಸ್ ಇಲ್ಲ, ಬೂಟಿಲ್ಲ, ಕೊನೆಗೆ ಬಾಚೋಕೆ ತಗಡಿನ ಚೂರು ಇಲ್ಲ. ಗುಡಿಸದೇ ಇದ್ದರೆ ಹೊಟ್ಟೆ ಹಸಿವು. ಹಸಿವಿನೆದುರು ಇವನ್ನೆಲ್ಲ ಮರೆಯಬೇಕು.
ಆದರೆ ನಮ್ ಕಂಡ್ರೆ ಮೂಗು ಮುಚ್ಕೋತಾರೆ, ನಮ್ಮನ್ನೇ ಕಸದ ತರ ಕಾಣ್ತಾರೆ. ನಾವು ಬೆಳಿಗ್ಗೆ ಎದ್ದು ಊರನ್ನೆಲ್ಲಾ ಕ್ಲೀನ್ ಮಾಡ್ತೇವೆ. ಊರೆಲ್ಲ ಕ್ಲಿನ್ ಆಯ್ತು, ನಿಮ್ ಹಣ್ತೇರ್ನ ಎಬ್ಬಿಸಿ ರಂಗೋಲಿ ಹಾಕಿ ಎಂದು ಕೂಗಿ ಹೇಳ್ತೇವೆ. ಎಲ್ಲರೂ ಹೊಸ ಬಟ್ಟೆ ಹಾಕಿ, ಸೀರೆ ಪ್ಯಾಂಟ್, ಶರ್ಟ ಯೂನಿಫಾರ್ಮ ಹಾಕಿ ನೀಟಾಗಿ ನಾವು ಸ್ವಚ್ಛ ಮಾಡಿದ ರಸ್ತೆಲಿ ನಡೀತಾರೆ. ನಾವೇನಾದ್ರೂ ಎದುರಾದರೆ ಕೆಟ್ಟದ್ದಾಗಿ, ಅಸಹ್ಯವಾಗಿ ನೋಡಿ ಮೂಗ್ ಮುಚ್ಕೊಂಡು ಹೋಗ್ತಾರೆ. ‘ಯಾಕ್ ಹಾಗ್ ಮಾಡ್ತೀರಿ?’ ಕೇಳಿದ್ರೆ ಏನೋ ಸಂಘ ಕಟ್ಟಿಕೊಂಡವ್ರೆ, ಕಸ ಬಾಚುವವ್ರ ಧಿಮಾಕ್ ನೋಡು ಅಂತಾರೆ. ಆ ಕಡೆ ಸಂಬಳವೋ ಅದೂ ಸರಿ ಇಲ್ಲ, ಸರ್ಕಾರ ಕೊಡ್ತೇನೆ ಹೇಳಿದ್ದನ್ನೂ ನಮ್ಗೆ ಕೊಡೋದಿಲ್ಲ. ನಮ್ ಪರಿಸ್ಥಿತಿ ಇದು.” (ಅನುರಾಧಾ, ಪೌರ ಕಾರ್ಮಿಕ ಮುಖಂಡರು)
“ಸಾರಾಯಿ ಕುಡಿಯದೇ ಇದ್ರೆ ಗುಂಡಿ ಒಳಕ್ ಇಳಿಯಕ್ ಆಗಾಂಗ್ ಇಲ್ಲರೀ. ನಾನು ದಿನಾ ಕುಡದೇ ಒಳಕ್ ಇಳಿಯೋದು. ಸೆಪ್ಟಿಕ್ ಟ್ಯಾಂಕ್ ಗಳು ಕಟ್ಟುಕಂಡಿದ್ರೆ, ಹೇಲನೂ ಪಾಲನೂ ಎಲ್ಲಾನೂ ಕೈಯಿಂದಲೇ ತಗಿಬೇಕು. ತಗಿಯಾಕೆ ಹೇಲು ನೀರನಾಗ ಮುಣುಗಬೇಕು ನಾನು.” (ಬರಮಪ್ಪ, ಕೆ.ವಿ ನೇತ್ರಾವತಿಯವರ ಬರಹದಿಂದ)
“ಅಲ್ರೀ, ನನಗಿಂತ ಮೊದಲೇ ಈ ನಮ್ ದಡಿಯಾ ರಾಮಾಂಜನೇಯನ ಹತ್ರರಿ ಅವ್ರ ಈ ಶಂಕರ ಮಠದ ಎದ್ರುನ ಪಿಟ್ ಗುಂಡಿ ಇಳಿ ಅಂತ್ ಅಂದ್ರರೀ. ಅಂವ ತಾ ಇಳಿಯೋದಿಲ್ಲಾ, ಕಾನೂನೈತಿ ಹೀಂಗ್ ಕೆಲ್ಸಾ ಮಾಡ್ಸ ಬಾರ್ದ್ರಿ ಅಂದ್ನ ರಿ. ಅಂವ ಆಗಾದುಲ್ಲಾ ಅಂದಬಳಿ ನನ್ ಕರುದ್ರಿ. ಜಬರ್ ದಸ್ತಿಲೆ ಅಂಗಿ ಚೊಣ್ಣಾ ತೆಗ್ಸಿದ್ರಿ. ಈ ಕೆಲ್ಸಾ ಮಾಡಾಕ್ ನನ್ನುನ ಯಾವಾಗ್ಲು ಬಳಸ್ತಾರ್ರಿ. ಸಾಯ್ಬ್ರಿಗ ಹೇಳಿ ಹೇಳಿ ಸಾಕಾಗ್ಯೇದ. ಇನ್ನು ತಡಕೊಕಾಗಲ್ಲ ಅಂತನ ಸಂಘದೋರ ಸಾಯ ತೆಕ್ಕೊಂಡು ಟೇಶನ್‍ದಾಗರಿ ಕಂಪ್ಲೆಟ್ ಕೊಟ್ಟಿನ್ರೀ. ಯಾರ್ ಬರ್ತಾರ ಬರ್ಲಿ. ಈಗ್ ಕಮೀಶನರ್, ಇಂಜಿನೀರ್, ಸಾವ್ಕಾರ್ರು ನಮ್ ದಾಂಡೇಲಿಲಿ ಇಲ್ರಿ. ಕೋರ್ಟಿಗ್ ಹೋಗ್ಯಾರಂತ್ರಿ. ಮಾಡ್ ಬಾರದ್ ನಾನೇನ್ ಮಾಡೀನ್ರಿ.” (ದರ್ಶಿ,ದಾಂಡೇಲಿ)
ಇಂಥ ನೂರಾರು ದಾರುಣ ಕಥೆಗಳು ಪ್ರತಿ ದಿನ ಅವರೊಟ್ಟಿಗೆ ಹುಟ್ಟಿ ಅವರೊಂದಿಗೆ ಸಾಯುತ್ತವೆ. ಇದನ್ನೆಲ್ಲ ಕೇಳಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನಾಗರಿಕ ಸಮಾಜ ಮೌನವಾಗಿದೆ. ಮೌನ ಮುರಿಯುವುದು ಹೇಗೆ? ಯಾವಾಗ?
ಹೋರಾಟವಿಲ್ಲದೇ ಜನಸಾಮಾನ್ಯರ ಸಮಸ್ಯೆಯ ಕುರಿತು ಯಾರೂ ಗಮನಹರಿಸುತ್ತಿಲ್ಲ ಎನ್ನುವುದಕ್ಕೆ ಪ್ರಸ್ತುತ ಸಾಲು ಸಾಲು ಉದಾಹರಣೆಗಳಿವೆ. ಹಿಂದೆಲ್ಲಾ ಹೋರಾಟಗಳಿಗೆ ಒಂದು ರೀತಿಯ ಮನ್ನಣೆ ಇತ್ತು. ಪಾರ್ಲಿಮೆಂಟ್, ವಿಧಾನ ಸೌಧದಲ್ಲಿ ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ನ್ಯಾಯಕ್ಕಾಗಿ ಬೀದಿಯಲ್ಲಿ ನಡೆಯುವ ಹೋರಾಟಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ತುಂಬುತಿದ್ದವು. ಪ್ರಜಾಸತ್ತಾತ್ಮಕವಾಗಿ ನಡೆಯುವ ಧರಣ, ಮುತ್ತಿಗೆ, ಮುಷ್ಕರ, ರಸ್ತೆ ತಡೆ .. ಇತ್ಯಾದಿ ಬೀದಿ ಪ್ರತಿಭಟನೆಗಳೇ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಈವರೆಗೆ ಜೀವಂತ ಇಟ್ಟುಕೊಂಡು ಬಂದವು. ಸಮಸ್ಯೆ ಆಲಿಸುವವರು ಕುರುಡಾದಾಗ ಪ್ರತಿಭಟನೆಯ ಘೋಷಣೆಯ ಧ್ವನಿಯ ಮೂಲಕ ಕಣ್ಣು ತೆರೆಸಲಾಗುತ್ತಿತ್ತು. ಕುರುಡುತನದೊಂದಿಗೆ ಕಿವುಡುತನವೂ ಬಂದಿರುವುದರಿಂದ ಜನ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕುರಿತೇ ನಂಬಿಕೆ ಕಳೆದುಕೊಳ್ಳುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಪ್ರಮುಖ ಬೇಡಿಕೆಗಳನ್ನು ಗುರುತಿಸುವ ಮತ್ತು ಈಡೇರಿಸುವ ಬದಲು ಪ್ರತಿಭಟನೆಯನ್ನೇ ಹತ್ತಿಕ್ಕುವ ಮತ್ತು ಅದನ್ನು ಅವಜ್ಞೆ ಮಾಡುವ ಕೆಲಸ ನಿರಂತರವಾಗುತ್ತಿದೆ. ಹಿಂದೆಲ್ಲಾ ತಾವು ಮಾಡಿದ ತಪ್ಪಿಗಾಗಿ ನಾಚಿಕೆ ಪಡುವಷ್ಟಾದರೂ ಸಂವೇದನೆಯನ್ನು ಹೊಂದಿರುವ ಸಮಾಜ ಇತ್ತು. ಆದರೆ ಇಂದು ಜಾಗತೀಕರಣದ ಮೋಹಕ್ಕೆ ಬಿದ್ದ ಮನುಷ್ಯÀ ಜಾತಿ, ಧರ್ಮ ಮತ್ತು ಹಣದ ಲೆಖ್ಖಾಚಾರÀದಲ್ಲಿ ಮನುಷ್ಯನನ್ನು ಅಳೆಯುವ ಈ ಹೊತ್ತಿನಲ್ಲಿ ಅಂಥ ಕಿರು ಸಂವೇದನೆಯನ್ನೂ ಕಳೆದುಕೊಂಡಿದ್ದಾನೆ. ಬಿಸಿ ಊಟದ, ಅಂಗನವಾಡಿಯ ಹೆಣ್ಣುಮಕ್ಕಳು, ಬುಡಕಟ್ಟಿನವರು, ದಲಿತರು…ಇತ್ಯಾದಿ ನಿರ್ಲಕ್ಷಿತ ಸಮುದಾಯದ ತಮ್ಮ ಸಮಸ್ಯೆಯನ್ನು ಜನರೆದುರು ಇಟ್ಟಾಗಲೂ ಸಂವೇದನಾಶೀಲತೆಯ ಕೊರತೆಯನ್ನು ಕಂಡಿದ್ದೇವೆ.
ಇದು ನಮ್ಮ ಜಿಲ್ಲೆಯ ಸ್ಥಿತಿ ಮಾತ್ರವಲ್ಲ. ದೇಶದಾದ್ಯಂತ ಹೀಗೇ ಇರುವುದು. ಜಾಡಮಾಲಿಗರು, ಬಂಗಿಗಳು, ಕಸದವರು, ಬೀದಿಕೆಲಸದವರು, ಮುನ್ಸಿಪಾಲ್ಟಿ ವರ್ಕರ್ ಹೀಗೆ ಹಲವು ಹೆಸರುಗಳಿವೆ ಇವರಿಗೆ. ಇತ್ತೀಚೆಗೆ ಅವರನ್ನು ಜಾಡಮಾಲಿಗರು ಎನ್ನುವ ಬದಲು ‘ಪೌರ ಕಾರ್ಮಿಕ’ ಎಂದು ‘ಸ್ಕೆವೆಂಜರ್’ ಎಂದು ಕರೆಯುವ ಕ್ರಮ ಇದೆ. ಆದರೆ ಈ ರೀತಿ ಹೆಸರಿನ ಬದಲಾವಣೆಯಿಂದ ಅವರ ಸಮಸ್ಯೆ ಪರಿಹಾರವಾಗಲಾರದೆಂಬುದನ್ನೂ ಅರ್ಥಮಾಡಿಕೊಳ್ಳಬೇಕು. 1973ರಲ್ಲಿ ಮಲ ಹೊರುವ ಪದ್ಧತಿಯನ್ನು ಸರ್ಕಾರ ರದ್ದು ಮಾಡಿ ಕಾನೂನು ಮಾಡಿದೆ ಎನ್ನುವುದು ಸತ್ಯವಾದರೂ ಇಂದೂ ಬೀದಿಯಲ್ಲಿ ಕಸದ ಜೊತೆಗೆ ಮಲ ಗುಡಿಸುವ ಕೆಲಸ, ಮ್ಯಾನ್ ಹೋಲ್ ಕೆಲಸ, ಬೀದಿ ಮಲವನ್ನು ಕೈಗಾಡಿಗೆ ತುಂಬುವ ಕೆಲಸ ನಡೆಯುತ್ತಲೇ ಇದೆ. ಬಿದಿರಿನ ಬುಟ್ಟಿಯ ಬದಲು ಪ್ಲ್ಯಾಷ್ಟಿಕ ಬುಟ್ಟಿ ಬಂದಿದೆಯಷ್ಟೆ. 1973ರ ಕಾನೂನಿನಿಂದ ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ಏನೂ ಬಂದಿಲ್ಲ.
ಪೌರಕಾರ್ಮಿಕರ ಕೆಲಸದಲ್ಲಿ 90 ರಷ್ಟು ಜನ ದಲಿತ ಸಮುದಾಯದವರೇ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸ್ವಲ್ಪ ಒಳ್ಳೆಯ ಕೆಲಸವನ್ನು ಮೇಲ್ಜಾತಿಯವರೇ ಪಡೆಯುತ್ತಾರೆ. ಈ ಶ್ರೇಣಿಕೃತ ಜಾತಿ ಪದ್ಧತಿಯ ಭಾಗವಾಗಿ ದಲಿತ ಸಮುದಾಯದ ಬಗ್ಗೆ ಈ ಸಮಾಜ ಇಟ್ಟುಕೊಂಡ ಅಸಡ್ಡೆ,ಅಸ್ಪøಷ್ಯತೆ ಇಲ್ಲೂ ಮುಂದುರೆದಿದೆ. ಮೇಲ್ಜಾತಿಯವರು ಭಾರತದಲ್ಲಿ ಮೊದಲಿನಿಂದಲು ದಲಿತರನು ಊರ ಹೊರಗೆ ಇಟ್ಟಿದ್ದರು. ಹೊಲಸೆತ್ತುವ ಕಾಯಕವನ್ನೇ ಅವರಿಗೆ ಧರ್ಮ- ಪುರಾಣ- ಪುನರ್ಜನ್ಮದ ಭಯ ಹುಟ್ಟಿಸಿ ಖಾಯಂ ಮಾಡಿದ್ದರು. ಸ್ವಾತಂತ್ರ್ಯ ಬಂದು 70 ವರ್ಷದ ನಂತರ ಕೂಡ ದಲಿತ ಸಮುದಾಯ ಇದೇ ಕೆಲಸ ಮಾಡುವುದು ಅನಿವಾರ್ಯ ಎಂದಾದರೆ ಸ್ವಾತಂತ್ರ್ಯಕ್ಕೇನು ಅರ್ಥ? ಇಷ್ಟೆಲ್ಲಾ ವಿಜ್ಞಾನ ತಂತ್ರಜ್ಞಾನದ ಬೆಳವಣಿಯಾದ ಮೇಲೆ ಕೂಡ ಕಸ ಎತ್ತಲು ಯಾವ ಯಂತ್ರವನ್ನೂ ಬಳಸದೇ ಕೈಯಿಂದಲೇ ಬಾಚಬೇಕಾದ ಸ್ಥಿತಿ ಇನ್ನೂ ಇದೆ ಎಂದಾದರೆ ಆಧುನಿಕತೆಗೇನು ಅರ್ಥ? ಅದು ಯಾರ ಪರ?
500 ಜನ ನಾಗರಿಕರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕೆಂಬ ಕುರಿತು ಆಯೋಗದ ವರದಿ ಇದ್ದರೂ ಅಷ್ಟೊಂದು ಪ್ರಮಾಣದಲ್ಲಿ ನೇಮಕಮಾಡದೇ ಕಡಿಮೆ ಜನರಿಂದಲೇ ದುಡಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿಯ ಹುಸಿಕನಸಿನೊಂದಿಗೆ ತೀವ್ರವಾಗಿ ಜಾರಿಗೊಂಡ ಖಾಸಗಿಕರಣ ಇವರನ್ನೂ ತಟ್ಟಿದೆ. ಇದರ ಭಾಗವಾಗಿ 2006 ರಿಂದ ಪೌರಾಡಳಿತ ಇಲಾಖೆಯು ಗುತ್ತಿಗೆ ಕಾರ್ಮಿಕರ ನೇಮಿಸಿಕೊಳ್ಳು ಸೂಚಿಸಿತು. ಖಾಯಂ ನೌಕರರ ಬದಲಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಯಿತು. ಇಲ್ಲಿಂದ ಅವರ ಶೋಷಣೆಯ ಇನ್ನೊಂದು ಮಜಲು ಪ್ರಾರಂಭವಾಯಿತು.
2006ರಿಂದ ಖಾಯಮಾತಿ ಇಲ್ಲದೇ ಕನಿಷ್ಟ ಕೂಲಿ ಇಲ್ಲದೇ ಕೆಲಸದ ಯಾವ ಭದ್ರತೆಯೂ ಇಲ್ಲದೇ ಅವರ ಬದುಕು ಬರಡಾಗಿದೆ. ಅವರಿಗೆ ಕೆಲಸ ಹೇಳುವವರು ಸ್ಥಳೀಯ ಆಡಳಿತ, ಅವರಿಗೆ ಸಂಬಳ ವಿತರಿಸುವವನು ಯಾವುದೋ ಗುತ್ತಿಗೆದಾರ. ಆ ಗುತ್ತಿಗೆದಾರನಿಗೆ ಮೂಲ ಉದ್ಯೋಗದಾತ ಸರ್ಕಾರದಿಂದ ಹಣ ಸಂದಾಯ. ಕೆಲಸ ಹೇಳುವವರು ಸಂಬಳ ಕೊಡುವುದಿಲ್ಲ, ಸಂಬಳ ವಿತರಿಸುವವನ ಮೇಲೆ ಸರ್ಕಾರಕ್ಕೆ ಯಾವ ಹಿಡಿತವೂ ಇಲ್ಲ. ಇವರ ಮಧ್ಯೆ ಪೌರ ಕಾರ್ಮಿಕರು ಫುಟ್ಬಾಲ್ ಗಳಾಗಿದ್ದಾರೆ. ಕಾಲಲ್ಲಿ ಒದೆಯುವವರೇ ಜಾಸ್ತಿ, ಕೈಯಲ್ಲಿ ಎತ್ತಿ ಸಾಂತ್ವನ ನಿಡುವವರಿಲ್ಲ.
ಇವರ ಹೋರಾಟ ಇಂದು ನಿನ್ನೆಯದಲ್ಲ. 1942ರಲ್ಲಿಯೇ ಪೌರ ಕಾರ್ಮಿಕರ ನಿಕೃಷ್ಟ ಬದುಕನ್ನು ನೋಡಿ ಆಕ್ರೋಶಗೊಂಡ ಕಮ್ಯುನಿಷ್ಟ ಕಾರ್ಯಕರ್ತ ಎಂ. ಎನ್. ಉಗ್ರಪ್ಪ ಮೈಸೂರಿನ ಎಂಟು ಮೊಹಲ್ಲಾದಲ್ಲಿ ಪೌರಕಾರ್ಮಿಕರ ಸಂಘವನ್ನು ಕಟ್ಟಿದರು. ತಮ್ಮ ಬೇಡಿಕೆಗಾಗಿ ಅರಮನೆಯ ಅಂಗಳದಲ್ಲೇ ಬಾವುಟ ಎತ್ತಿ ಪ್ರತಿಭಟಿಸಿದ್ದರು. ಬಿಜಾಪುರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎನ್. ಎಲ್. ಉಪಾಧ್ಯಾಯ, ಎನ್. ಕೆ. ಉಪಾಧ್ಯಾಯರ ನೇತೃತ್ವದಲ್ಲಿ ದೀರ್ಘ ಹೋರಾಟಗಳು ನಡೆದಿದ್ದುವು. ಅದರ ಮುಂದುವರಿಕೆಯಾಗಿ ಇಂದು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ನಮ್ಮ ಜಿಲ್ಲೆಯಲ್ಲಿ ಅವರ ಬೇಡಿಕೆಗಳಿಗೆ ಪ್ರಾಮಾಣಿಕ ಹೋರಾಟ ನಡೆಸುತ್ತಿದೆ ಮತ್ತು ಕೆಲವು ಬೇಡಿಕೆಗಳನ್ನಾದರೂ ಈಡೇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದ್ದು ಒಂದು ಆಶಾದಾಯಕ ಬೆಳವಣಿಗೆ.
ಬಹುತೇಕ ಅನಕ್ಷರಸ್ಥರಾದ ಇವರಿಗೆ ಅವರಿಗಿರುವ ಸೌಲಭ್ಯಗಳ ಪರಿಚಯವೂ ಇಲ್ಲ. ಅನಕ್ಷರತೆ ಮತ್ತು ಅಜ್ಞಾನ ಶೋಷಣೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಹೋರಾಟದ ಫಲವಾಗಿ ಇತ್ತೀಚೆಗೆ ಸರ್ಕಾರ ಇವರಿಗೆ 13,260-00(ನಗರ/ಪುರ ಸಭೆ ನೌಕರರು) 12,260-00 ಪಟ್ಟಣ ಪಂಚಾಯತಿ) ನಿಗದಿ ಮಾಡಿದೆ. ಆದರೆ ಅದೂ ಸರಿಯಾಗಿ ಜಾರಿ ಆಗಿಲ್ಲ ಎಂಬ ಆಪಾದನೆ ಅವರದು. ಕಾರ್ಮಿಕರಿಗೆ ಕೊಡಬೇಕಾದ ಡಿಫರೆನ್ಸ ಹಣ ಕೂಡ ಬಂದಿಲ್ಲ ಎನ್ನಲಾಗಿದೆ. ಇದನ್ನು ಸರಿಯಾಗಿ ಲೆಕ್ಕಮಾಡಿ ಕೇಳುವ ಸಾಮರ್ಥ್ಯಕೂಡ ಅವರಲ್ಲಿ ಬಹುತೇಕರಿಗಿಲ್ಲ. ಬಹುಶಃ ಇದು ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ನೌಕರರನ್ನು ಖಾಯಂ ಮಾಡಿದಾಗ ಮಾತ್ರ ಸರಿಹೋಗಬಹುದು.
ಇವರ ಕೆಲಸದ ವೈಖರಿ ಇವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. 1996ರಲ್ಲಿ ವೃತ್ತಿಪರ ಆರೋಗ್ಯ ಮತ್ತು ರಕ್ಷಣಾ ಕೇಂದ್ರ ಮುಂಬೈ ಇವರ ಸಮೀಕ್ಷೆಯ ಪ್ರಕಾರ ಪೌರ ಕಾರ್ಮಿಕರಲ್ಲಿ 55.9% ಜನ ಸಂಧಿವಾತಕ್ಕೆ, 42.3% ಜನ ಉಸಿರಾಟದ ತೊಂದರೆಗೆ, 26.3% ಜನ ಕರುಳು ಬೇನೆಗೆ, 12.55 % ಜನ ಚರ್ಮ ರೋಗಕ್ಕೆ, ಮತ್ತು 12.5% ಜನ ಮಾನಸಿಕ ಒತ್ತಡ ಮತ್ತು ಮದ್ಯಪಾನ ವ್ಯಸನಿಗಳಾಗಿರುವ ಕುರಿತು ಹೇಳಿದೆ. ಈಗ ಇಪ್ಪತ್ತು ವರ್ಷಗಳ ನಂತರ ಈ ಪ್ರಮಾಣ ಹೇಗಿರಬಹುದು ನೀವೇ ಚಿಂತಿಸಿ. ಇವರ ಆರೋಗ್ಯದಂಥ ಗಂಭೀರ ಸಂಗತಿಗಳ ಕುರಿತು ಗುತ್ತಿಗೆದಾರರಾಗಲಿ, ಸ್ಥಳೀಯಾಡಳಿತವಾಗಲೀ ಸೂಕ್ತ ಗಮನ ಹರಿಸದಿರುವುದು ಖಂಡನೀಯ. ಬದಲಾಗಿ ಕೆಲಸಕ್ಕೆ ಅಗತ್ಯಕ್ಕಿಂತ ಕಡಿಮೆ ಜನರನ್ನು ನೇಮಿಸಿ ಅತಿ ಹೆಚ್ಚು ದುಡಿತಕ್ಕೆ ದೂಡುವ ಕ್ರಿಯೆ ನಡೆಯುತ್ತಿದೆ.
ಇವರ ಅಭಿವೃದ್ಧಿಯ ಕುರಿತು ಐ.ಪಿ.ಡಿ ಸಾಲಪ್ಪನವರು ನೀಡಿದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅವರು ಹೇಳುವಂತೆ 500 ಪ್ರಜಾಸಂಖ್ಯೆಗೊಬ್ಬರಂತೆ ಪೌರ ಕಾರ್ಮಿಕರನ್ನು ನೇಮಿಸಬೇಕು; ಒಂದು ವರ್ಷ ಸತತ ಸೇವೆ ಸಲ್ಲಿಸುವಂತ ಎಲ್ಲಾ ತಾತ್ಕಾಲಿಕ ಕೆಲಸಗಾರರನ್ನು ಸೇವೆಯಲ್ಲಿ ಕಾಯಂಗೊಳಿಸಬೇಕು; ಇವರಿಗೆ ಸರ್ಕಾರಿ ಇಲಾಖೆಗಳ ಎರಡನೇ ದರ್ಜೆ ಗುಮಾಸ್ತರ ವೇತನ ಶ್ರೇಣಿಯನ್ನು ನೀಡಬೇಕು; ನಿವೃತ್ತರಾಗುವವರೆಗೆ ಇಪ್ಪತ್ತು ತಿಂಗಳ ವೇತನದಷ್ಟು ಮೊತ್ತವನ್ನು ಗ್ರ್ಯಾಚ್ಯುಟಿಯಾಗಿ ನೀಡಬೇಕು; ಎರಡು ವರ್ಷಗಳಿಗೊಮ್ಮೆ ಎಲ್ಲಾ ಪೌರ ಕಾರ್ಮಿಕರನ್ನು ಒಂದು ತಿಂಗಳ ವಿಶ್ರಾಂತಿ ರಜೆಯ ಮೇಲೆ ಕಳಿಸಬೇಕು; ಮಹಿಳಾ ಕಾರ್ಮಿಕರಿಗೆ ಎರಡು ತಿಂಗಳ ರಜೆಯನ್ನು ಅವರ ಅನುಕೂಲಕ್ಕೆ ತಕ್ಕಂತೆ ನೀಡಬೇಕು; ವಾರಕ್ಕೊಂದು ಸಂಪೂರ್ಣ ರಜೆಯ ದಿನವನ್ನು ಎಲ್ಲಾ ಸ್ಥಳೀಯ ಸಂಸ್ಥೆಯಲ್ಲಿ ನೀಡಬೇಕು ಮುಂತಾದ 54 ಶಿಫಾರಸ್ಸುಗಳನ್ನು 1976ರಲ್ಲಿಯೇ ಅವರು ಸೂಚಿಸಿದ್ದಾರೆ. ಆದರೆ ಇವುಗಳಲ್ಲಿ ಬಹುತೇಕ ಶಿಫಾರಸ್ಸುಗಳು 40 ವರ್ಷಗಳ ನಂತರ ಕೂಡ ಜಾರಿಯಾಗದಿರುವುದು ಖೇದಕರ ವಿಚಾರ.
ಇವುಗಳ ಜಾರಿ ಕುರಿತು ನಿರ್ಲಕ್ಷ್ಯತನ ಸ್ಥಳೀಯಾಡಳಿತದಲ್ಲಿ ಆವರಿಸಿಕೊಂಡಿದೆ. ಇವರು ವಾಸಿಸುವ ಪ್ರದೇಶಗಳೂ ಆರೋಗ್ಯಪೂರ್ಣವಾಗಿರುವಂತೆ, ಪಕ್ಕಾ ಮನೆಗಳಿರುವಂತೆ, ಇವರ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಸಿಗುವಂತೆ ನೋಡಿಕೊಳ್ಳಬೇಕಿದೆ. ಈ ಕುರಿತು ಹಲವು ಬಾರಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ವಿವಿಧ ರೀತಿಯಲ್ಲಿ ಬೇಡಿಕೆಗಳನ್ನಿಟ್ಟು ಹೋರಾಟ ಮಾಡಿದರೂ ಭರವಸೆಗಳು ಮಾತ್ರವೇ ಅವರ ಕೈ ಸೇರಿವೆ.
ದಿ: 06-04-2016ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೌರಾಡಳಿತದ ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆಯಂಥ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಐಟಿಯು ಸಂಘಟನೆಯ ಜೊತೆಗೆ ಜಂಟಿ ಸಭೆ ನಡೆದಿತ್ತು. ಈ ನಡಾವಳಿಯ 11 ನೇ ಅಂಶದಲ್ಲಿ ಉಲ್ಲೇಖಿಸಿದಂತೆ “ಪಿಎಫ್ ಮತ್ತು ಇಎಸ್‍ಐ ಭರಣ ಮಾಡದೇ ಇರುವ/ ನಿಯಮದಂತೆ ಭರಣ ಮಾಡದೇ ಕಡಿಮೆ ಪಾವತಿ ಮಾಡಿದ ಗುತ್ತಿಗೆದಾರರು 48 ಗಂಟೆ ಒಳಗಡೆ ಪಾವತಿ ಮಾಡಲು ಗಡುವು ನೀಡಲಾಯಿತು. ಒಂದು ವೇಳೆ ಪಾವತಿ ಮಾಡದೇ ಇದ್ದಲ್ಲಿ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲೆ ಮಾಡಲು ಸಂಘಟಕರಿಗೆ ಸೂಚಿಸಿದರು”. ಎಂದು ಇರುತ್ತದೆ. ಒಂದು ತಿಂಗಳ ಒಳಗೆ ಇತರೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ಆದೇಶಿಸಲಾಗಿತ್ತು. ಇದು ಪತ್ರಿಕೆಗಳಲ್ಲಿ ಬಂದುದನ್ನು ನೋಡಿ ನಾವೆಲ್ಲಾ ಖುಷಿ ಪಟ್ಟಿದ್ದೆವು. ಆದರೆ ಈ ಸಭೆ ನಡೆದು ಒಂದು ವರ್ಷವಾಗುತ್ತಾ ಬಂದರೂ ಅದು ಇನ್ನು ಜಾರಿಗೊಂಡಿಲ್ಲ ಎನ್ನುವುದು ಖೇದದ ಸಂಗತಿ.
ತಮ್ಮನ್ನು ಖಾಯಂ ಮಾಡಬೇಕೆಂಬ ಬೇಡಿಕೆ ರಾಜ್ಯಮಟ್ಟದ್ದಾದರೂ, ಈಗಾಗಲೇ ರಾಜ್ಯದಲ್ಲಿ ಹೋರಾಟ ಮಾಡಿದಾಗ ಸರ್ಕಾರ ಒಪ್ಪಿ ಆದೇಶಿಸಿದ ಸುತ್ತೋಲೆಗಳ ಪ್ರಕಾರ ವಾರದ ರಜೆ, ಬೆಳಗಿನ ಉಪಾಹಾರ, ವಿಶ್ರಾಂತಿ ಕೊಠಡಿ, ಸ್ನಾನಗೃಹ ಮತ್ತು 5 ನೇ ತಾರೀಖಿನ ಒಳಗೆ ಸಂಬಳ, ಕೆಲಸದ ಸ್ಥಳದಲ್ಲಿ ಸುರಕ್ಷಿತತೆ, ಕನಿಷ್ಟ ಕೂಲಿ, ಅರಿಯರ್ಸ್, ಗುರುತಿನ ಚೀಟಿ, ಹಾಜರಾತಿ ಪುಸ್ತಕ ಹೀಗೆ ಸಾಮಾನ್ಯ ಬೇಡಿಕೆಗಳನ್ನು ಕೂಡ ಎಲ್ಲಾ ಕಡೆ ಸಮರ್ಪಕವಾಗಿ ಜಾರಿ ಮಾಡದಿರುವುದು ಖಂಡನಾರ್ಹ ಮತ್ತು ಇದಕ್ಕಾಗಿ ನಾಗರಿಕ ಸಮಾಜ ತಲೆ ತಗ್ಗಿಸಬೇಕಾಗಿದೆ. ದೇಶದಾಂದ್ಯಂತ ಸ್ವಚ್ಛ ಭಾರತ ಅಭಿಯಾನದ ಕುರಿತು ಉತ್ಸಾಹದಿಂದ ಮಾತನಾಡಲಾಗುತ್ತಿದೆ. ಅಕ್ಟೋಬರ್ 2 ಬಂತೆಂದರೆ ಎಲ್ಲೆಲ್ಲೂ ಫೋಟೋ ಫೋಸುಗಳದೇ ಕಾರುಬಾರು. ಇದರ ಪ್ರಚಾರಕ್ಕೇ ಕೋಟ್ಯಾಂತರ ರೂಪಾಯಿಗಳ ವ್ಯಯ. ಆದರೆ ಜೀವನಪೂರ್ತಿ ಕನಿಷ್ಠಸೌಲಭ್ಯದಲ್ಲಿ ದುಡಿದುಡಿದು ಸುಣ್ಣವಾದ ಪೌರಕಾರ್ಮಿಕರ ಬದುಕಿಗೆ ಮಾತ್ರ ಬಿಡಿಕಾಸೂ ಇಲ್ಲ ಎಂದರೆ ಹೇಗೆ? ಸ್ವಚ್ಛ ಭಾರತ ಅಭಿಯಾನ ಪ್ರಾರಂಭ ಆಗಬೇಕಾದದ್ದು ಇವರ ಕೆಲಸವನ್ನು ಖಾಯಂ ಮಾಡುವ ಮೂಲಕ; ಇವರಿಗೊಂದು ಮನೆ ಕಲ್ಪಿಸುವ ಮೂಲಕ; ಇವರ ಮಕ್ಕಳಿಗೆ ಅಗತ್ಯ ಉಚಿತ ಶಿಕ್ಷಣ ನೀಡುವ ಮೂಲಕ ಎನ್ನುವ ಅರಿವು ಮೂಡಬೇಕಾಗಿದೆ.
ಸಂವಿಧಾನಾತ್ಮಕವಾಗಿಯೂ ಮತ್ತು ಮಾನವೀಯತೆಯಿಂದಲೂ ಪೌರ ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ ಇತ್ಯರ್ಥಪಡಿಸಬೇಕಿದೆ. ಜಿಲ್ಲೆಯಲ್ಲಿ 6 ತಿಂಗಳಿಗೊಮ್ಮೆಯಾದರು ಜಂಟಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಸಮಸ್ಯೆಗಳನ್ನು ಆಲಿಸಬೇಕಿದೆ. ಅವರ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಜಾರಿಗೊಳಿಸದಿರುವ ಅಧಿಕಾರಿಗಳ ಮೇಲೆ ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಫಲಾನುಭವಿಗಳಾದ ನಾಗರಿಕರು ಒತ್ತಾಯಿಸಬೇಕಾಗಿದೆ.
“ಒಬ್ಬ ಪೌರ ಕಾರ್ಮಿಕ ಹಿರಿಯನನ್ನು ‘ನಿಮಗೆ ಮ್ಯಾನ್ ಹೋಲ್ ಡ್ರೈನೇಜ್ ಕೆಲಸ ಮಾಡಲು ಕಷ್ಟ ಕಹಿ ಅಂತ ಅನಿಸುವುದಿಲ್ವೇ’ ಅಂತ ಪ್ರಶ್ನಿಸಿದ್ದಕ್ಕೆ ‘ಯಾಕ್ರಮ್ಮ ಕಷ್ಟ ಕಹಿ? ನನ್ನ ಮಕ್ಕಳದೂ ಅಂತ ಅಂದ್ಕಂಡ್ರಾಯ್ತು’ ಅಂದರಂತೆ. ಅಸಹಾಯಕತೆ ಸೊಲಿನ ನಡುವೆಯೂ ಈ ದೊಡ್ಡ ಮನಸ್ಸು ಇಲ್ಲದಿದ್ದರೆ ಈ ಕೆಲಸ ಮಾಡುವುದು ಕಷ್ಟ. ಆದರೆ ಇಂಥ ದೊಡ್ಡ ಮನಸ್ಸನ್ನೇ ಸಮಾಜ ಕೊಳಕು ಅಂತ ಗಣಿಸಿದೆ. ಇದು ಸಮಾಜವೇ ಕೊಳಕಾಗಿರುವುದರ ಲಕ್ಷಣ ಅಷ್ಟೆ.” ಎಂದು ತಮ್ಮದೊಂದು ಲೇಖನದಲ್ಲಿ ದೇವನೂರು ಮಹಾದೇವ ಹೇಳಿರುವುದು ಎಲ್ಲರ ಎದೆಯಲ್ಲಿ ಅಕ್ಷರವಾಗಿ ಮೊಳೆಯಬೇಕಿದೆ.
ವಿಠ್ಠಲ ಭಂಡಾರಿ ಕೆರೆಕೋಣ

ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ-ಮಾಣಿಕ್ ಸರ್ಕಾರ್

ಸಾಮಾನ್ಯ

ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ.

manik sarkar ಗೆ ಚಿತ್ರದ ಫಲಿತಾಂಶ

ವಿವಿಧ ರಾಜ್ಯಗಳ ಒಕ್ಕೂಟವಾಗಿರುವ ಈ ದೇಶದಲ್ಲಿ ಇದೀಗ ರಾಜ್ಯಗಳ ಸ್ವಾಯತ್ತತೆಯನ್ನು, ಸ್ವಾವಲಂಬನೆಯನ್ನು ಕಸಿದುಕೊಂಡು ಕೇಂದ್ರದ ಅಡಿಯಾಳನ್ನಾಗಿ ಮಾಡುವ ಹುನ್ನಾರ ನಡೆದಿದೆಯೇ? ಕೇಂದ್ರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ರಾಜ್ಯಗಳನ್ನು ಮಟ್ಟಹಾಕಲು ನಡೆಯುತ್ತಿರುವ ಕುತಂತ್ರ ಈ ಅನುಮಾನವನ್ನು ಬಲಪಡಿಸುತ್ತಿದೆ. ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿಪುರಾದ ಮುಖ್ಯಮಂತ್ರಿ ಕಾಮ್ರೇಡ್ ಮಾಣಿಕ್ ಸರ್ಕಾರ್ ಭಾಷಣವನ್ನು ಯಥಾವತ್ ಪ್ರಸಾರ ಮಾಡಲು ಆಕಾಶವಾಣಿಯು ನಿರಾಕರಿಸಿದ್ದು ಈ ನಿಟ್ಟಿನಲ್ಲಿ ಮತ್ತೊಂದು ಉದಾಹರಣೆ.

ಆಗಸ್ಟ್ 12ರಂದು ಅಗರ್ತಲಾದ ಆಲ್ ಇಂಡಿಯಾ ರೇಡಿಯೋ, ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ರೆಕಾರ್ಡ್ ಮಾಡಿಕೊಂಡಿತ್ತು. ಆದರೆ 14ರಂದು ಆಕಾಶವಾಣಿ ಉನ್ನತಾಧಿಕಾರಿಗಳು, “ಸರ್ಕಾರ್ ಅವರ ಭಾಷಣ ಜನಸಾಮಾನ್ಯರ ಭಾವನೆಗೆ ಧಕ್ಕೆ ತರುವಂತಿದೆಯಾದ್ದರಿಂದ ಅದನ್ನು 15ರಂದು ಪ್ರಸಾರ ಮಾಡಲಾಗುವುದಿಲ್ಲ” ಎಂದು ಇ ಮೇಲ್ ಕಳುಹಿಸಿದರು.

ಸುಳ್ಳು ಹಾಗೂ ಪೊಳ್ಳು ಜನರ ಪಾಲಿಗೆ ಯಾವತ್ತೂ ಸತ್ಯ ಕಹಿಯಾಗಿಯೇ ಇರುತ್ತದೆ. ಅದು ಸತ್ಯದ ತಪ್ಪಾ? ಸಾಮರ್ಥ್ಯ ಇಲ್ಲದ ಜನರದ್ದಾ? ಇಷ್ಟಕ್ಕೂ ಮಾಣಿಕ್ ಸರ್ಕಾರ್ ಭಾಷಣದಲ್ಲಿ ಹೇಳಿದ್ದೇನು? ಕೇಂದ್ರದ ಅಧಿನದಲ್ಲಿರುವ ಆಕಾಶವಾಣಿಗೆ ಭಾವನೆಗಳಿಗೆ ಧಕ್ಕೆಯಾಗುವ ಅಂಶ ಕಂಡಿದ್ದೆಲ್ಲಿ?

ಮಾಣಿಕ್ ಸರ್ಕಾರ್ ಭಾಷಣದ ಕನ್ನಡಾನುವಾದವನ್ನು ಮಾಧ್ಯಮnet ನೀಡುತ್ತಿದೆ. ಓದಿ,

ಪ್ರೀತಿಯ ತ್ರಿಪುರಾದ ಜನರೇ,

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತೆತ್ತ ಹುತಾತ್ಮರನ್ನು ಈ ಹೊತ್ತು ನಾನು ಕೃತಜ್ಞಾಪೂರ್ವಕವಾಗಿ ಸ್ಮರಿಸುತ್ತೇನೆ. ಹಾಗೂ ನಮ್ಮೊಡನಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಸ್ವಾತಂತ್ರ್ಯ ದಿನಾಚರಣೆ ಕೇವಲ ಸಂಬಭ್ರಮಾಚರಣೆಗೆ ಸೀಮಿತವಾದುದಲ್ಲ. ಈ ದಿನದ ಐತಿಹಾಸಿಕ ಮಹತ್ವ ಹಾಗೂ ಭಾರತೀಯರ ಭಾವನಾತ್ಮಕ ಬೆಸುಗೆಗಳನ್ನು ಗಮನದಲ್ಲಿಟ್ಟುಕೊಂಡು, ಈ ದಿನವನ್ನು ರಾಷ್ಟ್ರೀಯ ಆತ್ಮಾವಲೋಕನದ ಸುಸಂದರ್ಭವನ್ನಾಗಿ ಪರಿಭಾವಿಸಬೇಕಾಗಿದೆ.

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಚರ್ಚಿಸಲು ನಮ್ಮೆದುರು ಕೆಲವು ಪ್ರಸಕ್ತ, ಪ್ರಮುಖ ಹಾಗೂ ಸಮಕಾಲೀನ ಸಂಗತಿಗಳಿವೆ.

manik sarkar ಗೆ ಚಿತ್ರದ ಫಲಿತಾಂಶ

ವೈವಿಧ್ಯದಲ್ಲಿ ಐಕ್ಯತೆ ಎನ್ನುವುದು ನಮ್ಮ ಭಾರತದ ಸಾಂಪ್ರದಾಯಿಕ ಪರಂಪರೆ. ಜಾತ್ಯತೀತತೆಯ ಉನ್ನತ ಮೌಲ್ಯಗಳು ಭಾರತೀಯರನ್ನು ಒಗ್ಗೂಡಿಸಿ ಒಂದು ರಾಷ್ಟ್ರವನ್ನಾಗಿಸಿದೆ. ಆದರೆ ಇಂದು ಜಾತ್ಯತೀತ ಮೌಲ್ಯಗಳು ಅಪಾಯವನ್ನು ಎದುರಿಸುತ್ತಿವೆ. ಕೆಲವರ ಪಿತೂರಿಯಿಂದಾಗಿ ನಮ್ಮ ಸಮಾಜದಲ್ಲಿ ಅನಪೇಕ್ಷಿತ ಗೋಜಲುಗಳು ಉದ್ಭವಿಸುತ್ತಿದ್ದು, ಜನರನ್ನು ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ, ಜಾತಿ ಹಾಗೂ ಸಮುದಾಯಗಳ ಹೆಸರಲ್ಲಿ ನಮ್ಮ ರಾಷ್ಟ್ರೀಯ ಪ್ರಜ್ಞೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ದೇಶಕ್ಕೆ ಒಂದು ನಿರ್ದಿಷ್ಟ ಧರ್ಮದ ಗುರುತನ್ನು ಅಂಟಿಸುವ ಸಲುವಾಗಿ ಇದನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಗೋರಕ್ಷಣೆಯ ಹೆಸರಲ್ಲಿ ಸಮಾಜವನ್ನು ಒಡೆಯುವ ಸಂಚು ನಡೆಯುತ್ತಿದೆ. ಅದರಿಂದಾಗಿ ಈ ದೇಶದ ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳು ವಿಪರೀತ ಆತಂಕವನ್ನು ಎದುರಿಸುತ್ತಿವೆ. ಈ ಸಮುದಾಯಗಳಿಂದು ಅಸುರಕ್ಷತೆಯ ಭಾವದಿಂದ ಆತಂಕಕ್ಕೆ ಒಳಗಾಗಿವೆ. ಅವರ ಬದುಕು ಅನಿಶ್ಚಿತತೆಗೆ ದೂಡಲ್ಪಟ್ಟಿದೆ. ಈ ಅಪವಿತ್ರ ಪ್ರಚೋದನೆಗಳನ್ನು ಸಹಿಸಲಾಗದು. ಈ ವಿಧ್ವಂಸಕ ಪ್ರಯತ್ನಗಳು ನಮ್ಮ ಗುರಿಯ ದಿಕ್ಕೆಡಿಸುತ್ತವೆ. ನಮ್ಮ ಸ್ವಾತಂತ್ರ್ಯ ಸಂಘರ್ಷದ ಕನಸು, ಆದರ್ಶಗಳನ್ನು ಕಂಗೆಡಿಸುತ್ತವೆ.

ಯಾರು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿರಲಿಲ್ಲವೋ; ಅದಕ್ಕಿಂತ ಹೆಚ್ಚಾಗಿ, ಯಾರು ಕ್ರೂರಿ, ನಿಷ್ಕರುಣಿ, ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರಿಗೆ ಪೂರಕವಾಗಿ ವರ್ತಿಸಿದ್ದರೋ, ಯಾರು ಸ್ವತಃ ದೇಶದ್ರೋಹಿ ಶಕ್ತಿಗಳ ಜೊತೆಗಿದ್ದರೋ ಅವರ ಅನುಯಾಯಿಗಳೇ ಇಂದು ತಮ್ಮನ್ನು ತಾವು ವಿವಿಧ ಬಣ್ಣಗಳಿಂದ ಅಲಂಕರಿಸಿಕೊಂಡು ಭಾರತದ ಐಕ್ಯತೆ ಹಾಗೂ ಸಮಗ್ರತೆಗಳ ಬೇರನ್ನು ಬಗೆಯುತ್ತಿದ್ದಾರೆ. ಇಂಥಾ ವಿಧ್ವಂಸಕ ಪಿತೂರಿ ಹಾಗೂ ದಾಳಿಗಳನ್ನು  ಎದುರಿಸಿ ನಿಂತು, ಐಕ್ಯರಾಷ್ಟ್ರದ ಆದರ್ಶವನ್ನು ಎತ್ತಿ ಹಿಡಿಯಲು ಪಣತೊಡುವುದು ಪ್ರತಿಯೊಬ್ಬ ನಿಷ್ಠಾವಂತ ಹಾಗೂ ದೇಶಪ್ರೇಮಿ ಭಾರತೀಯನ ಕರ್ತವ್ಯವಾಗಿದೆ. ಈ ಆತಂಕಿತ ದಿನಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಭದ್ರತೆನ್ನು ಖಾತ್ರಿಪಡಿಸಿ, ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ.

ದೇಶದಲ್ಲಿ ಇಂದು ಇರುವ ಮತ್ತು ಇಲ್ಲದವರ ನಡುವಿನ ಅಂತರ ವಿಪರೀತ ಹೆಚ್ಚುತ್ತಿದೆ. ಬಹುದೊಡ್ಡ ಪ್ರಮಾಣದ ಸಂಪತ್ತು ಇಂದು ಕೆಲವೇ ಒಂದಷ್ಟು ಜನರ ಕೈಯಲ್ಲಿದೆ. ದೇಶದ ಬಹುಸಂಖ್ಯಾತ ಜನರು ಹಸಿವು ಮತ್ತು ಬಡತನಗಳಿಂದ ನರಳುತ್ತಿದ್ದಾರೆ. ಈ ಜನರು ಆಹಾರ, ಆಶ್ರಯ, ಉಡುಗೆ, ಶಿಕ್ಷಣ, ಆರೋಗ್ಯ ಸುರಕ್ಷೆ ಹಾಗೂ ಆದಾಯ ಖಾತ್ರಿ ಇರುವ ಉದ್ಯೋಗ ಭದ್ರತೆಗಳಿಂದ ವಂಚಿತರಾಗಿದ್ದಾರೆ. ಇದು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಆಶಯಗಳಿಗೆ ವಿರುದ್ಧವಾದದ್ದು. ನಮ್ಮ ದೇಶದ ಸದ್ಯದ ರಾಷ್ಟ್ರೀಯ ನೀತಿಗಳೇ ಸದ್ಯದ ಈ ದುರವಸ್ಥೆಗಳಿಗೆ ಕಾರಣವಾಗಿದೆ. ಈ ಜನವಿರೋಧಿ ನೀತಿಗಳನ್ನು ತಿದ್ದಿ, ಜನಪರವಾಗಿ ರೂಪಿಸುವ ಅಗತ್ಯವಿದೆ. ಆದರೆ ಇದು ಕೇವಲ ಮಾತಿನಿಂದ ಸಾಧಿಸಬಹುದಾದ ಕೆಲಸವಲ್ಲ. ಇದಕ್ಕಾಗಿ ದೇಶದ ಶೋಷಿತ, ವಂಚಿತ ಸಮುದಾಯದ ಜನರು ಒಗ್ಗಟ್ಟಿನ ದನಿ ಎತ್ತಿ ನಿರ್ಭೀತವಾಗಿ ಪ್ರತಿಭಟನೆ ದಾಖಲಿಸುವ ಅಗತ್ಯವಿದೆ. ಈ ದೇಶದ ಬಹುದೊಡ್ಡ ಪ್ರಮಾಣದ ಶೋಷಿತ ಜನಸಮುದಾಯದ ಏಳಿಗೆಗಾಗಿ ಪರ್ಯಾಯ ನೀತಿಗಳನ್ನು ರೂಪಿಸಲೇಬೇಕಿರುವುದು ಅನಿವಾರ್ಯ. ಇದನ್ನು ಜನಸಾಮಾನ್ಯರೇ ಸೇರಿ ರೂಪಿಸಬೇಕು. ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಐಕ್ಯಚಳವಳಿಯನ್ನು ದೊಡ್ಡ ವಿಸ್ತಾರದಲ್ಲಿ ಘೋಷಿಸಬೇಕು.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಜನರನ್ನು ನಿರಾಶೆಯ ಕಗ್ಗತ್ತಲಿಗೆ ದೂಡುತ್ತಿದೆ. ಒಂದೆಡೆ ಲಕ್ಷಾಂತರ ಜನರು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕೋಟಿಗಟ್ಟಲೆ ನಿರುದ್ಯೋಗಿ ಯುವಕರು ಕೆಲಸಕ್ಕೆ ಕಾಯುತ್ತಿದ್ದಾರೆ. ಈ ಬೃಹದಾಕಾರದ ಸಮಸ್ಯೆಗೆ ಪರಿಹಾರ ಹುಡುಕುವುದು ಸುಲಭದ ಕೆಲಸವೇನಲ್ಲ. ಇದನ್ನು ಸಾಧಿಸಲು ಸಣ್ಣಪ್ರಮಾಣದ ಉದ್ದಿಮೆಗಳನ್ನು ಬಲಪಡಿಸುವ ಅವಶ್ಯಕತೆಯಿದೆ. ಜನಸಾಮಾನ್ಯರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಕೂಡ ಈ ನಿಟ್ಟಿನಲ್ಲಿ ಅತ್ಯಗತ್ಯ. ಆದ್ದರಿಂದ, ವಿದ್ಯಾರ್ಥಿಗಳು, ಯುವಜನರು ಹಾಗೂ ದುಡಿಯುವ ವರ್ಗಗಳು ಒಗ್ಗೂಡಿ ಈ ಸ್ವಾತಂತ್ರ್ಯ ದಿನದಂದು ವಿಧ್ವಂಸಕ ನೀತಿಗಳ ವಿರುದ್ಧ ಸಾಮೂಹಿಕ ಮತ್ತು ನಿರಂತರ ಚಳವಳಿಯೊಂದನ್ನು ಹುಟ್ಟುಹಾಕುವ ಪ್ರತಿಜ್ಞೆ ಕೈಗೊಳ್ಳಿ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಗೆ ಪ್ರತಿಯಾಗಿ ತ್ರಿಪುರಾದ ರಾಜ್ಯ ಸರ್ಕಾರವು ತನ್ನ ಮಿತಿಗಳ ಹೊರತಾಗಿಯೂ ಜನರ ಸಮಗ್ರ ಅಭಿವೃದ್ಧಿಗಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ಶೋಷಿತ ತಳಸಮುದಾಯಗಳ ಅಭಿವೃದ್ಧಿಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಸಂಪೂರ್ಣ ವಿಭಿನ್ನವಾದ ಪರ್ಯಾಯ ಮಾರ್ಗ. ಈ ಯೋಜನೆಗಳು ಕೇವಲ ತ್ರಿಪುರಾದ ತಳಸಮುದಾಯಗಳನ್ನು ಮಾತ್ರವಲ್ಲ, ದೇಶದ ಇತರ ಭಾಗಗಳ ಶೋಷಿತ ವರ್ಗಗಳ ಗಮನವನ್ನೂ ಸೆಳೆದಿವೆ. ಇದು ಇಲ್ಲಿರುವ ಕೆಲವು ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಹನೆಯಾಗುತ್ತಿಲ್ಲ. ಆದ್ದರಿಂದಲೇ ಅವರು  ಪಿತೂರಿ ನಡೆಸಿ ರಾಜ್ಯದ ಸಮಗ್ರತೆಯನ್ನು ಒಡೆದು ಶಾಂತಿ ಕದಡಲು ಹವಣಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ಒಡ್ಡುತ್ತಿದ್ದಾರೆ. ನಾವು ಈ ಎಲ್ಲ ಅಪವಿತ್ರ ಹುನ್ನಾರಗಳ ವಿರುದ್ಧ ಒಗ್ಗೂಡಿ ನಿಂತು, ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕಿದೆ.

ಈ ಹಿನ್ನೆಲೆಯಲ್ಲಿ, ಈ ಸ್ವಾತಂತ್ರ್ಯ ದಿನದಂದು ತ್ರಿಪುರಾದ ಎಲ್ಲ ಸದ್ಭಾವನೆಯ, ಶಾಂತಿಪ್ರಿಯ ಹಾಗೂ ಪ್ರಗತಿಪರ ಜನರು ವಿಧ್ವಂಸಕ ಶಕ್ತಿಗಳ ವಿರುದ್ಧ ಐಕ್ಯ ಸಂಘರ್ಷದ ಪ್ರತಿಜ್ಞೆ ಕೈಗೊಳ್ಳೋಣ.

ಜಿಲ್ಲೆಯಲ್ಲಿರುವ ದೇವದಾಸಿ ಕುಟುಂಬಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಒತ್ತಾಯ

ಸಾಮಾನ್ಯ

ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಆಚರಣೆಗಳಲ್ಲಿ ಈ ದೇವದಾಸಿ ಪದ್ಧತಿ ಪ್ರಮುಖವಾದುದು. ಜಮೀನ್ದಾರಿ ವರ್ಗ ಮತ್ತು ಪುರೋಹಿತಶಾಹಿ ವರ್ಗ ಒಟ್ಟಾಗಿ ದೇವರ ಹೆಸರಿನಲ್ಲಿ ಕೆಳ ಮತ್ತು ದಲಿತ ಸಮುದಾಯವನ್ನು ಮೌಢ್ಯದ ಕೂಪಕ್ಕೆ ದೂಡಿ, ಅವರ ಬದುಕಿನ ಘನತೆಯನ್ನೇ ಕಿತ್ತುಕೊಂಡಿದೆ.

ಇದು ಅನಕ್ಷರತೆ, ಬಡತನ ಮತ್ತು ಅಜ್ಞಾನದಿಂದ ಅಸಹಾಯಕರಾದ ಸಮುದಾಯವೊಂದರ ಹೆಣ್ಣು ಮಕ್ಕಳನ್ನು “ದೇವದಾಸಿ”ಯರನ್ನಾಗಿಸಿ, ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುವ ‘ಪುರುಷ’ ಕೇಂದ್ರಿತ ಹೀನ ಮನಸ್ಸಿನ ಭಾಗವೇ ಆಗಿದೆ. ಹೀಗೆ ಹೆಣ್ಣನ್ನು ಕುದಿವ ಎಣ್ಣೆಯ ಕೊಪ್ಪರಿಗೆಗೆ ದೂಡುತ್ತಿರುವುದು ಆಧುನಿಕ ಎನ್ನಿಸಿಕೊಳ್ಳುವ ಸಮಾಜದೊಳಗೆ ಅಡಗಿ ಕೂತಿರುವ ಕ್ರೌರ್ಯ ಮತ್ತು ಹಿಂಸೆಯ ಭಾಗವೇ ಆಗಿದೆ. ಈ ಪದ್ಧತಿಯನ್ನು ನಾಶಮಾಡಲು ಪ್ರಗತಿಪರ ಸಂಘಟನೆಗಳು ವ್ಯಕ್ತಿಗಳು ಅವಿರತವಾಗಿ ಹೋರಾಟ ಮಾಡುತ್ತಲೇ ಬಂದರೂ ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯಲು ಸಾಧ್ಯವಾಗಿಲ್ಲ ಎಂಬುದು ಇತ್ತೀಚೆಗೆ ಶಿರಸಿಯ ಬನವಾಸಿಯಲ್ಲಿ ಕಂಡುಬಂದ ‘ಮುತ್ತು ಕಟ್ಟಿಸಿಕೊಂಡವರ ಗೋಳಿನ ಕಥೆ’(ಪ್ರಜಾವಾಣಿ ಪತ್ರಿಕೆಯಲ್ಲಿ ಸಂಧ್ಯಾ ಹೆಗಡೆ ಸುದ್ದಿ ಮಾಡಿದ್ದಾರೆ) ಸಾರಿ ಹೇಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹೀನ ಪದ್ಧತಿ ಇನ್ನೂ ಜೀವಂತ ಇರುವುದು ಮತ್ತು ಮುತ್ತು ಕಟ್ಟುವ ಪದ್ಧತಿ ಜಾರಿಯಲ್ಲಿರುವುದು ವಿಷಾದದ ಸಂಗತಿ ಮಾತ್ರವಲ್ಲ ಖಂಡನಾರ್ಹವಾದದ್ದು ಕೂಡ.
ಹಾಗೆಯೇ ಇಂತಹ ಅಮಾನವೀಯ ಪದ್ಧತಿಗೆ ದೂಡಲ್ಪಟ್ಟ ಈ ಮಹಿಳೆಯರು ದೇವಸ್ಥಾನದಲ್ಲಿ, ಊರಿನಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ನಡೆಸುತ್ತಿದ್ದರೂ ಅವರಿಗೆ ನೀಡಬೇಕಾದ ಸೌಲಭ್ಯವನ್ನು ನೀಡದಿರುವುದು ಕೂಡ ಅಷ್ಟೇ ಖಂಡನಾರ್ಹವಾದುದು.

ಹಲವು ದಶಕಗಳ ಹೋರಾಟದ ನಂತರ ದೇವದಾಸಿ ಪದ್ಧತಿಯ ನಿರ್ಮೂಲನೆಯ
ಉದ್ದೇಶದಿಂದ ಅವರ ಅಭಿವೃದ್ಧಿಗಾಗಿ ಸರ್ಕಾರ ಕೆಲವು ತಾತ್ಕಾಲಿಕ ಕಾರ್ಯಕ್ರಮಗಳನ್ನು ರೂಪಿಸಿದೆ. ಪುನರ್ವಸತಿ, ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಮುಂತಾದವುಗಳನ್ನು ಈ ಭಾಗದವರಿಗೆ ಒದಗಿಸದಿರುವ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ನಮ್ಮ ಸಂಘಟನೆಗಳು ಖಂಡಿಸುತ್ತವೆ.
ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಲ್ಲವೆಂದು ಜಿಲ್ಲಾಡಳಿತ ಹೇಳುತ್ತಿರುವಾಗಲೇ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಪದಾಧಿಕಾರಿಗಳಾದ ಮಾಳಮ್ಮನವರು ಮತ್ತು ಯು. ಬಸವರಾಜು ಅವರು ಜಿಲ್ಲೆಗೆ ಬಂದು ದೇವದಾಸಿ ಪದ್ಧತಿ ಇನ್ನೂ ಜೀವಂತ ಇರುವುದನ್ನು ಸಾಬೀತು ಮಾಡಿದ್ದಾರೆ. ದಯವಿಟ್ಟು ಇಡೀ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಕರ್ನಾಟಕದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಮಿತಿಯ ಸಹಕಾರದೊಂದಿಗೆ ದೇವದಾಸಿಯರ ಕುಟುಂಬವನ್ನು ಗುರ್ತಿಸಲು ವ್ಯಾಪಕ ಮತ್ತು ತಳಮಟ್ಟದ ಸರ್ವೆಯನ್ನು ಮಾಡಲು ನಾವು ವಿನಂತಿಸುತ್ತಿದ್ದೇವೆ.

ಈಗಾಗಲೇ ಕಂಡು ಬಂದ ಕುಟುಂಬಕ್ಕೆ ಸೂಕ್ತ ಸೌಲಭ್ಯ, ಪುನರ್ವಸತಿ, ಉದ್ಯೋಗ, ಶಿಕ್ಷಣ ಮತ್ತು ಗೌರವಯುತ ಬದುಕು ಕಂಡುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸಹಯಾನದ ಕಾರ್ಯಾಧ್ಯಕ್ಷರು ವಿಷ್ಣು ನಾಯ್ಕ, ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚಕಡ, ಚಿಂತನ ಉತ್ತರ ಕನ್ನಡದ ಜಿಲ್ಲಾ ಸಂಚಾಲಕರಾದ ಡಾ. ಎಂ.ಜಿ ಹೆಗಡೆ, ಡಾ.ವಿಠ್ಠಲ ಭಂಡಾರಿ, ಜನವಾದಿ ಮಹಿಳಾ ಸಂಘಟನೆಯ ದೀಪಾ ಸ್ಯಾಮ್ಸನ್, ಭಾರತ ವಿದ್ಯಾರ್ಥಿ ಫೆಡರೇಶನ್(sಜಿi) ಜಿಲ್ಲಾ ಸಂಚಾಲಕ ಗಣೇಶ ರಾಥೋಡ, ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್, ಕಾರ್ಯದರ್ಶಿ ದಾಮೋದರ ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ವಿಠ್ಠಲ ಭಂಡಾರಿ
ಜಿಲ್ಲಾ ಸಂಚಾಲಕ

ಅನಾಥವಾದ ಬಂಗಾರೇಶ್ವರ ಗೌಡರ ಸೈಕಲ್-ವಿಠ್ಠಲ ಭಂಡಾರಿ

ಸಾಮಾನ್ಯ

                                   ಅನಾಥವಾದ ಸೈಕಲ್



ನಾನು ಬಂಗಾರೇಶ್ವರರನ್ನು ಮೊದಲು ನೋಡಿದ್ದು ಶಿರಸಿಯಲ್ಲಿ ನಡೆದ ಎಸ್ ಎಫ್ ಐ ಸಮ್ಮೇಳನದಲ್ಲಿ. ಆಗಲೂ ಅವರು ವಿದ್ಯಾರ್ಥಿಗಳಿಗೆ ಬದ್ಧತೆಯ ಬಗ್ಗೆ ಮತ್ತು ಓದಿನ ಅಗತ್ಯದ ಬಗ್ಗೆ ಹೇಳುತ್ತಿದ್ದರು.ತನ್ನ ಇಳಿ ವಯಸ್ಸಿನಲ್ಲಿಯೂ ಅವರು ಅಧ್ಯಯನ ಶಿಬಿರಕ್ಕೆ ಬಂದು ಕುಳಿತುಕೊಳ್ಳುತ್ತಿದ್ದರು.ಸಾಮಾನ್ಯವಾಗಿ ಅವರೊಂದಿಗೆ ಕಮ್ಯುನಿಷ್ಟ ಪಕ್ಷದ ಸಾಹಿತ್ಯವಾಗಲೀ, ,ಪಕ್ಷದ ಪತ್ರಿಕೆಯಾಗಲೀ ಇರುತ್ತಿತ್ತು. ಎರಡೂ ಕಾಲಿನ ಸತು ಕಳೆದುಕೊಂಡು ಮಲಗಿದ ಕಾ. ಬಂಗಾರೇಶ್ಡರರನ್ನು 15 ದಿನದ ಹಿಂದೆ ಕಾಣಲು ಹೋದಾಗಲೂ ಅವರು ಹೇಳಿದ್ದು ನನಗೆ ಕುಳಿತು ಓದಲು ಆಗುತ್ತಿಲ್ಲ. ಓದಿಸಿಕೊಳ್ಳಲು ಯಾರೂ ಸಿಗುತ್ತಿಲ್ಲ.ಎಂದು ಬೇಸರ ಪಟ್ಟುಕೊಂಡರು. ಈ ಭಾಗದದ ಭೂಮಿಗಾಗಿ ಹೋರಾಟ ಅರ್ಧಕ್ಕೆ ನಿಂತಿದೆ. ನನಗೂ ಎದ್ದು ಓಡಾಡಲು ಆಗುತ್ತಿಲ್ಲ. ಻ದನ್ನು ಮುಂದುವರಿಸಬೇಕಾಗಿತ್ತು ಎಂದು ತನ್ನಿಂದ ೆದ್ದುಓಡಾಡಲು ಸಾಧ್ಯವಾಗದಿರುವ ಬಗ್ಗೆ ನೋವುಪಟ್ಟರೇ ಹೊರತು 4-6 ತಿಂಗಳಿನಿಂದ ೊಂದೇ ಕಡೆ ಮಲಗಿದ್ದರಿಂದ ಬೆನ್ನಿಗಾದ ಎರಡು ಹುಣ್ಣಿನ ಬಗ್ಗೆ ಏನೂ ಹೇಳಲೇ ಇಲ್ಲ. ತಂದೆ ಕೆರೆಯಾ ಗೌಡರಿಂದ ಸಂಘಟನೆಯ ಕಡೆ ಒಲಿದ ಬಂಗಾರೇಶ್ವರರು ಕೊನೆಯವರೆಗೂ ಕರ್ನಾಟಕ ಪ್ರಾಂತ ರೈತ ಸಂಘದಲ್ಲಿ ದುಡಿದರು. ಬದುಕಿನ ಕೊನೆಯವರೆಗೂ ಹೋರಾಟದ ಮಂತ್ರವನ್ನೇ ಪಟಿಸಿದ ಿವರಿಗೆ ಕೊಣೆಗೂ ಒಂದು ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅರ್ಧನಿಂತ ಮನೆಯನ್ನು ಪೂರ್ನಗೊಳಿಸಲು ಅವರು ಯಾರಿಗೂ ಹೇಳಲಿಲ್ಲ.ಾದರೆ ಅರ್ಧಕ್ಕೆ ನಿಂತ ಭೂಮಿಹೋರಾಟವನ್ನು ಪೂರ್ಣಗೊಳಿಸಲು ಒತ್ತಾಯಿಸುತ್ತಲೇ ಇಂದು ತಮ್ಮ ಬದುಕಿನ ಹೋರಾಟ ಮುಗಿಸಿದ ಕಮ್ಯುನಿಷ್ಟನಿಗೊಂದು ಲಾಲ್ ಸಲಾಮ್

 ಬಂಗಾರೇಶ್ವರ ಗೌಡರು ಎಂದ ತಕ್ಷಣ ನೆನಪಾಗೋದು ಅವರ ಬಳಿ ಇರುವ ಸೈಕಲ್ಲ್. ಶಿರಸಿಯಿಂದ ಸುಮಾರು 10 ಕಿಮಿ ದೂರದಲ್ಲಿರುವ ಬಿಕ್ಕನಹಳ್ಳಿಯಿಂದ ಅವರು ಸೈಕಲ್ ಹೊಡೆದುಕೊಂಡು ಶಿರಸಿಗೆ ಬರುತ್ತಿದ್ದರು. ಅತಿಕ್ರಮಣ ಭೂಮಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರನ್ನು ಸಂಘಟಿಸಲು ಹಳ್ಳಿಹಳ್ಳಿ ತಿರುಗಲೂ ಇದೇ ಸೈಕಲ್. ಎಲ್ಲಾ ಕೆಲಸ ಮುಗಿಸಿ ಇದೇಸೈಕಲ್ ಹಿಡಿದು ರಾತ್ರಿ ಮನೆಗೆ ಹೋಗುತ್ತಿದ್ದರು. ನಾನು ಅವರನ್ನು ನೋಡಿದಾಗಿನಿಂದ ಅವರ ಸಂಗಾತಿಯಾಗಿದ್ದುದು ಈಸೈಕಲ್. ಆದರೆ ಈಗ ಅದು ತನ್ನ ಬಹುಕಾಲದ ಸಂಗಾತಿಯನ್ನು ಕಳೆದುಕೊಂಡು ಮೂಲೆಯಲ್ಲಿ ಕುಳಿತಿದೆ. ಅದರ ಪಕ್ಕದಲ್ಲಿರುವುದು ಬರೇ ಕಭ್ಬಿನ ಪಟ್ಟಿಯಲ್ಲ. ಹೊಸ ಮನೆ ಕಟ್ಟಿದ ಮೇಲೆ ಮಧ್ಯೆ ನಾಲ್ಕು ಮರದ ಹಲಗೆ ಹಾಕಿ ಪುಸ್ತಕ ಇಡಲು ಒಂದು ಕಪಾಟು ಮಾಡಿಕೊಳ್ಳಬೇಕೆನ್ನುವ ಆಸೆಯಿಂದ ಮಾಡಿಸಿಟ್ಟಿದ್ದು. ಈ ಆಸೆಯೂ ಪೂರೈಸಲೇ ಇಲ್ಲ. ವೈದ್ಯಕೀಯ ಕ್ಷೇತ್ರ ಎಷ್ಟೇ ಸುಧಾರಿಸಿದೆ ಅಂದರೂ ಬಡವರಪಾಲಿಗೆ ಅದು ಯಮರೂಪಿಯಾಗಿಯೇ ಇದೆ. ಬೆನ್ನು ಮೂಳೆಯ ಆಪರೇಶನ್ ಮಾಡಲು ಹೋದ ವೈದ್ಯರ ಅಜಾಗರೂಕತೆಯಿಂದಾಗಿ ದೇಹದ ಅರ್ಧಭಾಗವನ್ನು ಕಳೆದುಕೊಳ್ಳಬೇಕಾಯಿತು. ಹೆಂಡತಿ ಕೂಡ 70 ವರ್ಷ ದಾಟಿದವರು. ಅನಾಥರಾಗಿ ಬದುಕಿನ ಸಂಧ್ಯಾಕಾಲವನ್ನು ಕಳೆಯಬೇಕು. ಅರ್ಧ ಕಟ್ಟಿದ ಮನೆ, ಜಂಗುಹಿಡಿದ ಸೈಕಲ್ಲು, ಬಡತನದ ನಿತ್ಯದೂಟ……ವಿಠ್ಠಲ ಭಂಡಾರಿ


ಹಿರಿಯ ರೈತ ಹೋರಾಟಗಾರ ಕಮ್ಯುನಿಷ್ಟ ಮುಂದಾಳು ಬಂಗಾರೇಶ್ವರ ಗೌಡ ಇಂದು ನಮ್ಮನ್ನಗಲಿದರು. 76 ವರ್ಷದ ಬಂಗಾರೇಶ್ವ ಗೌಡರು ಪತ್ನಿ, ಮಗಳು ಮತ್ತು ಮಗನನ್ನು ಅಲ್ಲದೇ ಚಳುವಳಿಯ ಸಂಗಾತಿಗಳನ್ನು ಅಗಲಿದ್ದು ದುಖದ ಸಂಗತಿ. ಇವರು ಅವಿಭಜಿತ ಕಮ್ಯುನಿಷ್ಟ ಪಕ್ಷದ ಸಾಮಾನ್ಯ ಸದಸ್ಯರಾಗಿ 1964 ರ ನಂತರ ಭಾರತ ಕಮ್ಯುನಿಷ್ಟ ಪಕ್ಷ(ಮಾಕ್ರ್ಸವಾದಿ) ಸದಸ್ಯರಾಗಿ ಜೀವನದ ಕೊನೆಯ ತನಕವೂ ಅದೇ ಸಿದ್ಧಾಂತದಲ್ಲಿ ಮುಂದುವರೆದವರು. ಅಪ್ಪಟ ಸಿದ್ಧಾಂತ ಬದ್ಧ ವ್ಯಕ್ತಿತ್ವದ ಇವರು ಭೂಮಿ ಹೋರಾಟದ ಮುಂಚೂಣಿ ನಾಯಕರು. ಪ್ರಾರಂಭದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಮತ್ತು ನಂತರ ಕರ್ಣಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಮುಂದಾಳುವಾಗಿ ಅಧ್ಯಯನಶೀಲರೂ ಆದ ಇವರು ಹೋರಾಟದ ಜೊತೆಗೆ ಜನಜೀವನದಲ್ಲಿ ಹಾಸುಹೊಕ್ಕಾದ ಮೌಢ್ಯತೆಯ ವಿರುದ್ಧ ಸಾಂಸ್ಕೃತಿಕ ಜಾಗೃತಿಗೂ ತೊಡಗಿಸಿಕೊಂಡಿದ್ದರು. ಜಿಲ್ಲೆ ಮತ್ತು ರಾಜ್ಯ-ರಾಷ್ಟ್ರ ಮಟ್ಟದ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಇವರ ತಂದೆ ಕೆರಿಯಾ ಗೌಡರು ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ರೈತ ಕಾಮರ್ಿಕರ ಆಂದೋಲನದ ಭಾಗವಾಗಿ ಕಾಮ್ರೇಡ್ ಧಾರೇಶ್ವರ ವಕೀಲರ ಜೊತೆಗಿದ್ದರು. ಬಂಗಾರೇಶ್ವರರೂ ಕೂಡ ಎಂ.ಎಸ್.ಧಾರೇಶ್ವರ, ಪಿಕಳೆ ಮಾಸ್ತರ್, ಈರಾ ಮಾರ್ಯಾ ಮತ್ತು ಪಿ.ಜಿ.ಮಶಾಲ್ದಿಯವರ ಜೊತೆಗಾರರಾಗಿ ಶಿರಸಿ ಕೇಂದ್ರಿತವಾಗಿ ಸುತ್ತಲಿನ ಹಲವು ತಾಲೂಕುಗಳಲ್ಲಿ ಮನೆ, ನಿವೇಶನ ರಹಿತರ ಬೇಡಿಕೆಗಳಿಗಾಗಿ ಮತ್ತು ಅತಿಕ್ರಮಣ ಭೂಮಿ ಗಾಂವ್ ಠಾಣಾ ಭೂಮಿ ಸಕ್ರಮಾತಿಗೆ ಆಂದೋಲನ ಕಟ್ಟಿದರು. ಅಂದಿನ ದಿನಗಳಲ್ಲಿ ಜಿಲ್ಲೆಗೆ ರಾಜ್ಯ ರಾಷ್ಟ್ರ ಮಟ್ಟದ ನಾಯಕರನ್ನು ಹೋರಾಟಕ್ಕೆ ಕರೆಸಿ ಮಾರ್ಗದರ್ಶನ ಪಡೆಯುತ್ತಿದ್ದರು. ಶಿರಸಿಯ ಕಾಮರ್ಿಕ ಚಳುವಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ವೈದ್ಯರ ನಿರ್ಲಕ್ಷ್ಯದಿಂದ ಅವರು ಕಾಲಿನ ಸ್ವಾಧೀನತೆಯನ್ನು ಕಳಕೊಂಡು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಇದರಿಂದ ತನ್ನ ರೈತ ಕಾಮರ್ಿಕರ ಚಳುವಳಿಯ ಸಂಘಟನೆಯ ಕೆಲಸದಿಂದ ಬೇಗನೇ ನಿರ್ಗಮಿಸುತ್ತಿರುವ ಬಗ್ಗೆ ತೀವ್ರ ನೋವನ್ನು ತೋಡಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಇತ್ತೀಚೆಗೆ ತನ್ನೂರಿನಲ್ಲಿ ತಾನೇ ನೇತೃತ್ವ ವಹಿಸಿದ ನಿವೇಶನ ರಹಿತರ ಹೋರಾಟ ಹಾಗೂ ಅತಿಕ್ರಮಣ ಭೂಮಿ ಸಕ್ರಮಾತಿಯ ಆಂದೋಲನವನ್ನು ತೀವ್ರಗೊಳಿಸಲು ಕೂಡ ಸಂಗಾತಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಇಷ್ಟು ಬದ್ಧತೆಯ ಬಂಗಾರೇಶ್ವರರು ಅಗಲಿದಾಗ ನೂರಾರು ರೈತರು, ಹೋರಾಟದ ಸಂಗಾತಿಗಳು, ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಒಡನಾಡಿ ಮಂಜುನಾಥ ಪುಲ್ಕರ್, ಕಾರ್ಯದರ್ಶಿ ಶಾಂತಾರಾಮ ನಾಯಕ, ಸಿಐಟಿಯು ಜಿಲ್ಲಾ ಪದಾಧಿಕಾರಿಗಳಾದ ಸಿ.ಆರ್.ಶಾನಭಾಗ, ನಾಗಪ್ಪ ನಾಯ್ಕ, ಚಿಂತನ ಉತ್ತರಕನ್ನಡದ ಸಂಚಾಲಕರಾದ  ಮುಂತಾದವರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. 


ಸಿಪಿಐ(ಎಂ)ನಿಂದ ಅಂತಿಮ ನಮನ: ಸದಾ ಜನ ಹಿತಕ್ಕೆ ತುಡಿಯುತ್ತಿದ್ದ, ರೈತ ಕಾರ್ಮಿಕರ, ಯುವಜನರ ಕುರಿತು ಕೆಲಸ ಮಾಡುತ್ತಿದ್ದ ಕಮ್ಯುನಿಷ್ಟ ಸಿದ್ಧಾಂತಕ್ಕೆ ಬದ್ಧತೆಯ ಮತ್ತು ಸಮರ್ಪಣಾ ಮನೋಭಾವದ ಬಂಗಾರೇಶ್ವರ ಗೌಡರ ನಿಧನದಿಂದ ಜಿಲ್ಲೆಯ ಕಮ್ಯುನಿಷ್ಟ ಆಂದೋಲನದ ಹಿರಿಯ ಕೊಂಡಿ ಕಳೆದು ಹೋದದಂತಾಗಿದೆ. ಅವರಿಗೆ ಮನತುಂಬಿದ ಗೌರವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಭೂಮಿ ಸಂಬಂಧಿತ ಅನೇಕ ಹೋರಾಟಗಳನ್ನು ಮುನ್ನಡೆಸಿದ ಇವರ ನಿಧನದಿಂದ ಚಳುವಳಿಗೆ ಓರ್ವ ಹಿರಿಯ ಮಾರ್ಗದರ್ಶಕರನ್ನು ಕಳಕೊಂಡು ನಷ್ಟವುಂಟಾಗಿದೆ. ತನ್ನ ಸ್ವಾರ್ಥ ಬಿಟ್ಟು ಅರವತ್ತರ ದಶಕದಿಂದಲೇ ಅವಿರತವಾಗಿ ಐವತ್ತೈದಕ್ಕೂ ಹೆಚ್ಚುವರ್ಷ ಜಿಲ್ಲೆಯ ದುಡಿಯುವ ವರ್ಗಕ್ಕೆ ಸಮಪರ್ಿಸಿಕೊಂಡು, ಸಮಾಜ ಬದಲಾವಣೆಗೆ ಶೋಷಣೆಯಿಲ್ಲದ ಸಮಸಮಾಜದ ಕನಸು ನನಸಾಗಲು ತನ್ನಿಂದಾದಷ್ಟು ಕೆಲಸ ಮಾಡಿದ ಬಂಗಾರೇಶ್ವರರ ಆದರ್ಶವನ್ನು ಇಂದಿನ ಚಳುವಳಿಗಾರರು ಮುಂದುವರೆಸಿಕೊಂಡು ಹೋಗುವ ಪಣ ತೊಡುತ್ತದೆ ಎಂದು ಭಾರತ ಕಮ್ಯುನಿಷ್ಟ ಪಕ್ಷ (ಮಾಕ್ರ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತದೆ
                                                                                                                                                                                                       

ಮೂಲಭೂತವಾದ ಮತ್ತು ಕೋಮುವಾದ; ಮಹಿಳೆಯರ ಮುನ್ನಡೆಗೆ ನಿಯಂತ್ರಕ ಅಸ್ತ್ರಗಳು-ಯಮುನಾ ಗಾಂವ್ಕರ್, ಉತ್ತರ ಕನ್ನಡ

ಸಾಮಾನ್ಯ

ಮೂಲಭೂತವಾದ-ಧಮರ್ಾಂಧತೆ-ಕೋಮುವಾದ ಹೆಣ್ಣಿನ ಘನತೆ ನಾಶಮಾಡುವ, ಸವರ್ಾಂಗೀಣ ಅಭ್ಯುದಯ ತಡೆಯುವ ಅಪಾಯಕಾರಿ ವಿಚಾರಗಳು. ಇವು ಒಟ್ಟಾರೆ ಮಾನವ ಸಮುದಾಯದ ಮುನ್ನಡೆಯನ್ನೇ ನಿಯಂತ್ರಿಸುವ ಅಸ್ತ್ರಗಳಾಗಿವೆ. ಇಂಥ ಅನಾಹುತಕಾರಿ ಬೆಳವಣಿಗೆಯು ದುಡಿಯುವ ವರ್ಗವನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿದೆ. ಸಮಾಜದಲ್ಲಿ ಯಾವ ರೀತಿಯ ಮೌಲ್ಯಗಳು ಪ್ರವಹಿಸುತ್ತವೆಯೋ ಅದರ ಮೊದಲ ಹಾಗೂ ಅಂತಿಮ ಪರಿಣಾಮ ಮಹಿಳೆಯರ ಮೇಲೆಯೇ ಆಗುತ್ತಿದೆ. ದೇಶ-ಪ್ರದೇಶ, ಭಾಷೆ, ಧರ್ಮ-ಜಾತಿ-ಪಂಗಡ-ಪಂಥ-ಮತ-ಜನಾಂಗ ಹಾಗೂ ಗಡಿ ಗುರುತು ಮೀರಿ ಮಾನವ ಸಮುದಾಯದ ವಿಕಾಸವನ್ನು ಬಯಸುವ ವಿಶಾಲ ಆಲೋಚನೆಯ ಒಂದು ಕಾಮರ್ಿಕ ಸಂಘಟನೆಯಾಗಿ ನಾವು ಇದುವರೆಗೆ ಜಗತ್ತಿನಲ್ಲಿ ಗಮನಿಸಿದ್ದೇನು? ಎಲ್ಲಾ ಧರ್ಮಗಳಲ್ಲೂ ಮೂಲಭೂತವಾದ, ಅದರ ಮುಂದಿನ ಹಂತವಾದ ತನ್ನದೆನ್ನುವುದು ಮಾತ್ರ ಶ್ರೇಷ್ಠವೆಂಬ ದುರಂಹಂಕಾರದ ಕೋಮುವಾದ, ಅದು ಅಂತಿಮವಾಗಿ ಬೆಳೆಸುವ ಫ್ಯಾಸಿಷ್ಟ ಧೋರಣೆಯ ಮನೋಭಾವಗಳು ಇತ್ತೀಚಿನ ವಿದ್ಯಮಾನಗಳನ್ನು ಆತಂಕಕ್ಕೆ ಗುರಿಯಾಗಿಸಿವೆ.  ಇವು ಧಾಮರ್ಿಕ, ಆಥರ್ಿಕ ಸ್ವರೂಪದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿವೆ. ಅದರ ಪರಿಣಾಮವೇ ತಾಲಿಬಾನ್ ಕೃತ್ಯ, ಪೇಶಾವರ ಘಟನೆ, ಇಸ್ರೈಲ್-ಪ್ಯಾಲಿಸ್ಟೈನ್ ದುರ್ಘಟನೆಗಳು, ಮಕ್ಕಳು-ಮಹಿಳೆಯರು, ವೃದ್ಧರು, ಸೈನಿಕರು ಎಂದು ನೋಡದೇ ಸಜೀವ ದಹನ, ಸಾಮೂಹಿಕ ಕೊಲೆ, ಯುದ್ಧಗಳು. ಭಾರತದೊಳಗೂ ಕೂಡ ಧಾಮರ್ಿಕ ಅಸಹಿಷ್ಣುತೆ ಕೆನ್ನಾಲಿಗೆ ಚಾಚಿದೆ. ಕನರ್ಾಟಕದಲ್ಲಿ ಅದರಲ್ಲಿಯೂ ಕರಾವಳಿ ಹಾಗೂ ಮಲೆನಾಡಿನಲ್ಲಿ ಹಬ್ಬಿದ ಮೂಲಭೂತವಾದಿ, ಕೋಮುವಾದಿ ಕಚ್ಚಾಟಗಳು ಜನಸಾಮಾನ್ಯರನ್ನು ಭಯಗ್ರಸ್ಥಗೊಳಿಸುತ್ತಿವೆ.
ಹಾಗಾದರೆ ಈ ಮೂಲಭೂತವಾದ-ಕೋಮುವಾದ ಅಂದರೆ ಏನು? ಇವುಗಳ ಪರಿಣಾಮ ಮಹಿಳೆಯರ ಮೇಲೆ ಹೇಗಾಗಿದೆ? ಹೇಗಾಗುತ್ತಿದೆ? ಸಮಾಜದ ಮೇಲೆ ಅದರ ಒಟ್ಟಾರೆ ಪರಿಣಾಮ ಏನು? ಎಂಬುದನ್ನು ಅರಿಯಬೇಕಿದೆ; ಅರಗಿಸಿಕೊಳ್ಳಬೇಕಿದೆ; ಮೂಲಭೂತವಾದ ಮತ್ತು ಕೋಮುವಾದಗಳೆರಡನ್ನೂ ಗೆರೆ ಎಳೆದು ವಿಭಜಿಸಲಾಗದಷ್ಟು ಒಂದಕ್ಕೊಂದು ಹಾಸುಹೊಕ್ಕಾಗಿವೆ. ಕೋಮುವಾದ ತನ್ನ ಬೆಳವಣಿಗೆಗೆ ಆಯಾ ಧರ್ಮದಲ್ಲಿರುವ ಮೂಲಭೂತವಾದದ ಅಂಶಗಳನ್ನೇ ಬಳಸಿ ಬೆಳೆಯುತ್ತ ಹೋಗುತ್ತದೆ. ಹಾಗಾಗಿ ಇವೆರಡರಿಂದಲೂ ದುಡಿಯುವ ವರ್ಗದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಮೂಲಕ ದುಡಿಯುವ ವರ್ಗದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ.
ಮಹಿಳೆ ಮತ್ತು ಮೂಲಭೂತವಾದ: ಹಿರಿಯ ಚಿಂತಕರು ಹೇಳುವಂತೆ ಮೂಲಭೂತವಾದವನ್ನು ಕುರಿತು ಹೀಗೆ ಹೇಳುತ್ತಾರೆ-   ಮೂಲಭೂತವಾದವು ಯಾವುದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ನಿರ್ಧರಿಸಲು ಧರ್ಮ ಸಂಹಿತೆ ಬೇಕೆನ್ನುತ್ತದೆ. ಇಲ್ಲಿ ಬೋಧಿಸಲಾಗುವ ಸಂಪ್ರದಾಯ, ಕಟ್ಟಳೆಗಳು ಮತ್ತು ಸಾಮಾಜಿಕ ರಚನೆಯ ಸೂತ್ರಗಳು ಮಾತ್ರವೇ ದಿವ್ಯವಾದವು, ಅದನ್ನು ಪ್ರಶ್ನಿಸುವಂತಿಲ್ಲ, ಅದೇ ಪರಮಜ್ಞಾನ, ಅಂತಿಮ ಸತ್ಯ. ಧರ್ಮ ಬೋಧಿಸಿದ್ದನ್ನು ಯಾವ ಒರೆಗಲ್ಲಿಗೂ ಹಚ್ಚಿ ಪರೀಕ್ಷಿಸಬಾರದು, ವಿಮಶರ್ಿಸಬಾರದು, ಹಾಗೆ ಮಾಡಿದರೆ ಅವರು ಧರ್ಮದ್ರೋಹಿಗಳು ಎನ್ನುತ್ತದೆ. ಅಂದರೆ ಅರ್ಥವಿಷ್ಟೇ, ಸಮಾಜದ ಚಲನೆಯನ್ನು ಸ್ಥಗಿತಗೊಳಿಸುವ ವಿಚಾರ ಇದಾಗಿದೆ. ಪ್ರಜಾಸತ್ತಾತ್ಮಕವಾದ ಯಾವ ಕ್ರಿಯೆಗಳನ್ನೂ ಮಾಡದಂತೆ ಕೈ-ಬಾಯಿ ಕಟ್ಟಿಹಾಕುವ ಜ್ಞಾನದ ಬೆಳವಣಿಗೆಯನ್ನು ಒಪ್ಪದ ಧರ್ಮಗಳು ಹೇಳಿದ್ದೇ ಅಂತಿಮ ಸತ್ಯ ಎಂದು ನಂಬಿಸಿ ಭಯದಲ್ಲಿರಿಸುವ ವಿಚಾರವಾಗಿದೆ.
ಧರ್ಮ-ಜಾತಿ-ವರ್ಗ-ವರ್ಣಗಳನ್ನು ಮೀರಿ ಹೆಣ್ಣನ್ನು ಬಾಧಿಸಬಹುದಾದ ಸಂಗತಿ ಇದ್ದರೆ ಅದು ಮೂಲಭೂತವಾದ. ಮಾತೃಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಯಾವುದೆಲ್ಲ ಗೌರವವಾಗಿ ಬಂತೋ ಅದು ತನ್ನ ನಿಜಾರ್ಥ ಕೆಳೆದುಕೊಂಡು ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಾಡುವ ಸಂಗತಿಗಳಾಗಿ ಪರಿಣಮಿಸಿರುವುದು ದುರಂತ. ಸಂಸ್ಕೃತಿ ಹೆಸರಿನಲ್ಲಿ ಯಾವೆಲ್ಲ ನಂಬಿಕೆಗಳು ಆಚರಣೆಗಳು ಯಾವುದೋ ಒಂದು ಸಾರ್ವತ್ರಿಕ ಕಾಲಘಟ್ಟದಲ್ಲಿ ರೂಪುಗೊಂಡವೋ ಅವುಗಳೆಲ್ಲ ಪಿತೃಪ್ರಧಾನ ಸಮಾಜದಲ್ಲಿ ಕೇವಲ ಹೆಣ್ಣಿಗೆ ಮಾತ್ರವೇ ಆರೋಪಿಸಲ್ಪಟ್ಟವು; ವೈಭವೀಕರಿಸಲ್ಪಟ್ಟವು. ಇಡೀ ಸಂಸ್ಕೃತಿಯ ರಕ್ಷಣೆ ಹೆಣ್ಣಿನ ಹೆಗಲ ಮೇಲೆ ಹಾಕಿದ ಪುರುಷ ಸಮಾಜ ತಾನು ಮಾತ್ರ ಇದರ ಆಚೆ ನಿಂತು ಸ್ವಾತಂತ್ರ್ಯವನ್ನು ಅನುಭವಿಸಿದ, ಸಮಾಜದ ಪಾಲನೆ ಹೊರುವ ಕೆಲಸದ ನೆಪದಲ್ಲಿ ಸಮಾಜವನ್ನು ತನಗೆ ಬೇಕಾದಂತೆ ನಿಯಂತ್ರಿಸುವ ಜವಾಬ್ದಾರಿಯನ್ನೂ ತನಗೆ ತಾನೇ ಪಡೆದುಕೊಂಡ. ಆಧುನಿಕತೆ ಮತ್ತು ಅದರ ಭಾಗವಾಗಿ ಬಂದ ಶಿಕ್ಷಣ ಹೆಣ್ಣಿನ ಮೇಲೆ ಆರೋಪಿಸಲ್ಪಟ್ಟಂಥ ಸಂಸ್ಕೃತಿಯ ಹಲವು ಆಚರಣೆಗಳನ್ನು ಛೇದಿಸುತ್ತದೆ ಎಂದು ಅಂದುಕೊಳ್ಳುತ್ತಿರುವಾಗಲೇ ಅದು ಹಾಗಾಗದೇ ಸಂಸ್ಕೃತಿಯ ಹೊಸ ಮಾದರಿ ಹೆಣ್ಣಿನ ಕ್ರಿಯೆಗಳನ್ನು ಮಾತ್ರ ನಿಯಂತ್ರಿಸುವ ಹೊಸ ರೂಪದಲ್ಲಿ ಜಾರಿಗೆ ಬರುತ್ತಿದೆ. ಆಧುನಿಕತೆಯು, ಹೆಣ್ಣನ್ನು ಕಾಡುವ ಅನೇಕ ಮೂಲಭೂತವಾದಿ ಆಚರಣೆಗಳನ್ನು ಆಧುನಿಕ ಮಾಧ್ಯಮದ ಮೂಲಕ ವೈಭವೀಕರಿಸುವ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗುತ್ತಿದೆ.
ಸಂಸ್ಕೃತಿ ಎಂಬುದು ಜೀವನ ಕ್ರಮ. ಒಂದು ನಿಧರ್ಿಷ್ಟ ಕಾಲಘಟ್ಟದಲ್ಲಿ ನಿಧರ್ಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಅಥವಾ ಜನಾಂಗೀಯ ವ್ಯಾಪ್ತಿಯಲ್ಲಿರುವ ಜನಸಮುದಾಯ ರೂಢಿಸಿಕೊಂಡಿರುವ ಬದುಕಿನ ಕ್ರಮ. ಈ ಬದುಕಿನ ಕ್ರಮ ಭೂತಕಾಲದ ಜೊತೆಗೆ ಮತ್ತು ಭವಿಷ್ಯದ ಜೊತೆಗೆ ವರ್ತಮಾನವನ್ನು ಕೊಂಡಿಯಾಗಿ ಬೆಸೆಯುತ್ತದೆ. ಅದು ಅವರು ರೂಡಿಸಿಕೊಂಡು ಬಂದಿರುವ ನಂಬಿಕೆ, ಆಚರಣೆ, ಆಹಾರ ಪದ್ಧತಿ, ಉಡುಪು, ಕ್ರೀಡೆ, ಸಾಹಿತ್ಯ ಇವೆಲ್ಲವುಗಳ ಒಟ್ಟು ಮೊತ್ತ. ಈ ಎಲ್ಲವೂ ಅವರ ಬದುಕಿನ ಕ್ರಮದ ಹಿನ್ನೆಲೆಯಲ್ಲಿಯೇ ಹುಟ್ಟಿರುವುದು ಮತ್ತು ಅದೇ ಸಂದರ್ಭದಲ್ಲಿ ಅವರ ಬದುಕಿನ ಕರಮದ ಮೇಲೂ ಪರಿಣಾಮ ಬೀರಿರುತ್ತದೆ, ಬದುಕನ್ನು ನಿಧರಿಸುತ್ತಾ ಹೋಗುತ್ತದೆ. ಹೀಗೆ ರೂಪುಗೊಂಡ ಯೋಚನಾ ಕ್ರಮ ಆಯಾ ಕಾಲಕ್ಕೆ ಸ್ಪಂದಿಸುತ್ತಾ ಆ ಕಾಲದ ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಾ ಮುಂದುವರಿಯುತ್ತದೆ. ಈ ಹಂತದಲ್ಲಿ ಯಾವುದು ‘ಚನಲಶೀಲವಾಗಿರುತ್ತದೋ’ ಅದು ಸಂಸ್ಕೃತಿ. ಈ ಆಲೋಚನಾ ಕ್ರಮದಲ್ಲಿ ಯಾವುದು ಸ್ಥಗಿತವಾಗುತ್ತದೋ ಅದು ಮೂಲಭೂತವಾದ ಎನಿಸಿಕೊಳ್ಳುತ್ತದೆ.
ಹಿಂದೂ ಮೂಲಭೂತವಾದ ಭಾರತದ ಇಡೀ ಸಮಾಜವನ್ನೇ ಆಪೋಷಣ ತೆಗೆದುಕೊಳ್ಳುವಷ್ಟು ಬೆಳೆದಿದೆ. ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ ಮೂಲಭೂತವಾದ ಬೆಳೆಯಲು ಇನ್ನಷ್ಟು ಉಗ್ರವಾಗಲು ಕಾರಣವಾಗುತ್ತದೆ.
ಹಾಗಾಗಿ ಜಾತಿ, ಕೋಮುವಾದ, ಧರ್ಮ-ಧರ್ಮದ ಘರ್ಷಣೆ ಇವುಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಬೇಕು. ಉದಾ: ಒಂದೆಡೆ ಹಿಂದೂ ಸಮಾಜೋತ್ಸವ ನಡೆಯುತ್ತಲೇ ಅದರಲ್ಲಿ ಹೊಮ್ಮುವ ಅನ್ಯರ ಬಗೆಗಿನ ಧೋರಣೆ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ವಾತಾವರಣ ನಿಮರ್ಿಸುತ್ತದೆ. ಅವರು ಇನ್ನಷ್ಟು ಸಂಕುಚಿತಗೊಳ್ಳುತ್ತಾ ಹೋಗಲು ಕಾರಣವಾಗುತ್ತದೆ.  ಅಲ್ಪಸಂಖ್ಯಾತರಲ್ಲಿ ಮೂಲಭೂತವಾದದ ಸ್ವರೂಪವನ್ನು ಬುಖರ್ಾ ತೊಡುವ ಕ್ರಮದಲ್ಲಿ, ತಲಾಖ್ ಕೊಡುವಲ್ಲಿ, ಜಿಹಾದ್ನಲ್ಲಿ, ಹೆಣ್ಣನ್ನು ಹೊರಹೋಗಲು ಬಿಡದ ಪದ್ಧತಿಯಲ್ಲಿ, ವೈಜ್ಞಾನಿಕ ಶಿಕ್ಷಣ ಕೊಡಿಸಲು ಹೊಂದೇಟು ಹಾಕುವುದರಲ್ಲಿ  ಕಾಣಬಹುದು.
ಹಿಂದೂ ಮೂಲಭೂತವಾದದ ಸ್ವರೂಪವನ್ನು ವಿವಿಧ ವೃತಾಚರಣೆ ಮಾಡಿಸುವದರಲ್ಲಿ, ಮಠಗಳ, ಪುರೋಹಿತರ ಶಾಸ್ತ್ರಪದ್ಧತಿಗಳಲ್ಲಿ,  ಹಬ್ಬಹರಿದಿನಗಳಲ್ಲಿ ಮಾಡಿಸುವ ಅರ್ಥವಿಲ್ಲದ ಆಚರಣೆಗಳಲ್ಲಿ,  ಪರದಾ ಪದ್ಧತಿ, ವಿಧವಾ ವಿವಾಹಕ್ಕೆ ಸಮ್ಮತಿಸದಿರುವುದರಲ್ಲಿ, ವಾಸ್ತವಿಕ ಆಸ್ತಿಹಕ್ಕಿನ ನಿರಾಕರಣೆಯಲ್ಲಿ, ಇನ್ನೂ ಬಾಲ್ಯವಿವಾಹ ಹಾಗೂ ಕೇಶ ಮುಂಡನ ಜೀವಂತವಿರುವುದರಲ್ಲಿ ಕಾಣಬಹುದಾಗಿದೆ. ಮಡೆಮಡೆಸ್ನಾನ, ಫಲಜ್ಯೋತಿಷ್ಯ, ಶಾಸ್ತ್ರ ಹೇಳಿತೆಂಬ ಕಾರಣದಿಂದ ಹೆಣ್ಣನ್ನು ವಸ್ತುವಾಗಿ ಕಾಣುವುದು, ಎರಡನೇ ದಜರ್ೆಯಲ್ಲಿ ಕಾಣುವುದು ಮತ್ತು ಅಂಥ ಆಚರಣೆಗಳು….
ಹೆಣ್ಣು ಗಂಡಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಗಂಡ ಸತ್ತರೆ ಸತಿಸಹಗಮನ ಪದ್ಧತಿ ಇತ್ತು. ಆದರೆ ಹೆಂಡತಿ ಸತ್ತರೆ ಗಂಡನಿಗೆ ಯಾವುದೇ ಕಟ್ಟಳೆಗಳೇ ಇಲ್ಲದೇ ಇರುವುದು ಈ ಮೂಲಭೂತವಾದ ಹೆಣ್ಣನ್ನು ಎಷ್ಟು ಗುರಿಯಾಗಿಸಿದೆ ಎಂಬುದನ್ನು ತೋರಿಸುತ್ತದೆ. ಸಮಾಜದಲ್ಲಿ ಬೇರೂರಿರುವ ಪಾಳೆಗಾರಿತನದಿಂದಾಗಿ ಹೆಣ್ಣು ಗಂಡಿನ ಆಸ್ತಿಯಾಗಿಸಿ, ಆಕೆ ಆಭರಣ ಪ್ರಿಯೆ ಎಂದು ನಂಬಿಸಿ, ಸೌಂದರ್ಯವೇ ಭೂಷಣವೆಂದು, ಮಕ್ಕಳಿಲ್ಲದ ಬಾಳು ಯಾತಕ್ಕೆಂದು ಬಂಜೆತನಕ್ಕೆ ಹೆಣ್ಣನ್ನೇ ಗುರಿಯಾಗಿಸಿದ್ದು ಇಂದಿನ ವಿಜ್ಞಾನ ಬೆಳವಣಿಗೆ ಹಾಗೂ ಆಧುನಿಕ ಶಿಕ್ಷಣದ ನಂತರವೂ ಮುಂದುವರಿದಿದೆ. ಹಾಗಾಗಿಯೇ ಆಸಾರಾಂ ಬಾಪುರಂಥ ದೇವಮಾನವರು, ಮಠಗಳ ಅಧಿಕಾರ ಬಳಸಿ, ದೈವಿಕ ಸ್ವರೂಪದಲ್ಲಿ ತಾನಿರುವೆನೆಂದು ಹೇಳಿ ಅತ್ಯಾಚಾರ ಮಾಡುವವರನ್ನು, ಸಹೋದ್ಯೋಗಿಯ ಮೇಲೆ ಬಲಾತ್ಕಾರ ಮಾಡುವ, ಲೈಂಗಿಕ ಹಿಂಸೆ ನೀಡುವವರನ್ನು, ತನ್ನ ವಿದ್ಯಾಥರ್ಿನಿ ಎಂಬ ಅರಿವೂ ಇಲ್ಲದಂತೆ ಶಿಕ್ಷಕನೋರ್ವ ಅತ್ಯಾಚಾರ ಎಸಗುವ, ದುಡಿಯುವ ಪ್ರದೇಶದಲ್ಲಿ ಮೇಲಾಧಿಕಾರಿಗಳೇ ದೌರ್ಜನ್ಯ ಎಸಗುವಂಥ ಭೀಕರತೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ.
ಹೆಣ್ಣು ಹೆಚ್ಚು ಓದುವ, ಹೊರಗೆ ದುಡಿಯುವ ಸಮಾನತೆ ಬಯಸುವ, ಅಧಿಕಾರ ಪಡೆಯುವ ಯಾವೂದೂ ಮೂಲಭೂತವಾದಿಗಳಿಗೆ ಹಿಡಿಸುವುದಿಲ್ಲ. ಗಂಡು ದರ್ಪಕ್ಕೆ ಹೆಣ್ಣು ಗುರಾಣಿ ಅಥವಾ ಬಲಿಪಶುವಾಗಿ ಮಾತ್ರ ಬಳಕೆಯಾಗುತ್ತದೆ. ಈ ಅಪಾಯವನ್ನು ನಮ್ಮ ಸಮಾಜ ಅರಿಯುವುದು ಯಾವಾಗ?
ಪುರಾಣಗಳಲ್ಲಿ ಪಾತಿವ್ರತ್ಯದ ಕಲ್ಪನೆಯನ್ನು ಚಚರ್ಿಸುವಿದಾದರೆ, ಉದಾ: ಇಂದ್ರನಿಂದ ಮೋಸಹೋದ ಅಹಲ್ಯೆಯು ಶಾಪಗ್ರಸ್ತೆಯಾಗಿ ಕಲ್ಲಾಗುತ್ತಾಳೆಯೇ ಹೊರತೂ ಮೋಸಗೊಳಿಸಿದವನಿಗೆ ಏನೂ ಆಗದು. ಹಾಗೇ ಸೀತೆಯಲ್ಲಿ ಮಾತ್ರ ಶೀಲ ಶಂಕೆ. ಹೀಗೆ ಮೂಲಭೂತವಾದ ಪ್ರತಿಷ್ಠಾಪಿಲು ಪುರಾಣ, ಮಹಾಕಾವ್ಯ ಇತ್ಯಾದಿಗಳನ್ನು ಬಳಸಿಕೊಳ್ಳಲಾಗುತ್ತದೆ.
ಪ್ರಾರಂಭದಿಂದಲೂ ಮೂಲಭೂತವಾದ ಹೆಣ್ಣನ್ನು ನಿಷ್ಕ್ರಿಯಗೊಳಿಸುತ್ತ ಬಂದಿದೆ, ಅಸ್ಥಿರಗೊಳಿಸುತ್ತಾ ಬಂದಿದೆ. ಸಮಾಜ ನಿಯಂತ್ರಿಸುವ ನೆಪದಲ್ಲಿ ಕಾನೂನುಗಳೆಲ್ಲವನ್ನೂ ಹೆಣ್ಣು ಮತ್ತು ಕೆಳಜಾತಿಯವರನ್ನು ಕೇಂದ್ರೀಕರಿಸಿಯೇ ಮಾಡಲಾಯಿತು. ಗಾದೆಗಳೂ ಹಾಗೇ ಸೃಷ್ಟಿಯಾದವು. ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ, ಹೆಣ್ಣಿಗೆ ಹೆಣ್ಣೇ ಶತ್ರು, ಸ್ತ್ರೀ ಬುದ್ಧಿ ಪ್ರಳಯಾಂತಿಕಾ, ಇತ್ಯಾದಿ. ಹಾಗೇ ಹೆಣ್ಣು ಸಮಾಜದ ಕಣ್ಣು ಎನ್ನುತ್ತಲೇ ಎಲ್ಲಾ ಧರ್ಮದಲ್ಲೂ, ಜಾತಿಯಲ್ಲೂ ಮನೆಯಲ್ಲಿ ಕೊನೆಯ ಊಟ ಮಹಿಳೆಯರದ್ದೆ; ಗಂಡು ಶ್ರೇಷ್ಟ, ಆತನೇ ಕುಟುಂಬದ ಯಜಮಾನ ಎಂಬ ಕಾರಣಕ್ಕೆ. ಅತಿ ಹೆಚ್ಚು ಅಪೌಷ್ಟಿಕತೆ ಇರುವುದೂ ಕೂಡ ಮಹಿಳೆಯರಿಗೆಯೇ.
ಹಾಗಾಗಿ ಮಾನವ ಕುಲದ ಘನತೆಯನ್ನೇ ನಾಶಮಾಡುವ, ತಲೆತಲಾಂತರದ ವರೆಗೆ ದ್ವೇಷವನ್ನೇ ಉಸಿರಾಡುವ, ಮೂಲಭೂತವಾದ ಮಹಿಳೆಯರನ್ನು ಎಂದಿಗೂ ಗೌರವಿಸದು. ಅದು ಮಹಿಳೆಯರನ್ನು ಕೇವಲ ಗಂಡು ಮ್ಕಕಳನ್ನು ಹೆರುವ ಸಾಧನವಾಗಿ ಮಾತ್ರ ನೋಡುತ್ತದೆ. ಅತ್ಯಾಚಾರ, ಬಲಾತ್ಕಾರ, ಸಾಂಸ್ಕೃತಿಕ ಆಕ್ರಮಣಗಳು ನಡೆದಾಗ ಅದು ಅತ್ಯಂತ ಸಹಜ ಎಂಬಂತೆ ಪರಿಗಣಿಸುತ್ತದೆ. ದೇವಮಾನವರು, ಮಠಾಧೀಶರು, ಎಲ್ಲಾ ಧರ್ಮಗಳ ಪುರೋಹಿತರು, ಧನವಂತರು, ಮಹಿಳೆಯರಿಗೆ ಮಾತ್ರ ಪಾವಿತ್ರ್ಯದಿಂದಿರಬೇಕೆಂದು ಉಪದೇಶಿಸುತ್ತಾರೆ, ವಾದ ಮಂಡಿಸುತ್ತಾರೆ. ಇವರು ಪ್ರತಿಪಾದಿಸುವ ಹೆಣ್ಣಿನ ಶೀಲ ಮತ್ತು ಪಾವಿತ್ರ್ಯವನ್ನು ಕೆಡಿಸುವ ವಿಕೃತ ಮನಸ್ಸಿನ ಪುರುಷರಿಗೆ ಇವರ ಉಪದೇಶಾಮೃತ ಇಲ್ಲ. ಹಾಗೇನಾದರೂ ಬಲಾತ್ಕಾರಕ್ಕೆ ಬಂದ್ರೆ ‘ಅಣ್ಣಾ ಎಂದು ಕೂಗು, ಪ್ರತಿಭಟಿಸಲಾಗದಿದ್ದರೆ ಕಣ್ಣುಮುಚ್ಚಿ ಸುಮ್ಮನೆ ಅನುಭವಿಸು, ತಾಯತ ಕಟ್ಟಿಸಿಕೋ, ಮಠ-ದೇವಸ್ಥಾನಕ್ಕೆ ಹರಕೆ ಹೊತ್ತುಕೋ, ಭವಿಷ್ಯ ಹೇಳುವವರಿಗೆ ಶರಣಾಗು, ನೀನುಟ್ಟ ಉಡುಪು ಆತನಿಗೆ ಕಾಮೋದ್ರೇಕಿಸಿತು, ನೀನು ನೀತಿಗೆಟ್ಟವಳು; ನಿನಗೆ ಸಂಸ್ಕೃತಿ ಇಲ್ಲ,’ ಇತ್ಯಾದಿ ಹೆಣ್ಣಿಗೇ ತಿರುಗುಬಾಣ!
ಹೀಗೆ ಹೆಣ್ಣಿನ ಕುರಿತ ಮೂಲಭೂತವಾದಿ ದೃಷ್ಟಿಕೋನ. ಅವಳ ಜನನಾಂಗದ  ಮೇಲೆ ಮಾತ್ರ ಶೀಲ, ಸಂಸ್ಕೃತಿ ಪ್ರತಿಪಾದಿಸುವ ಮೂಲಭೂತವಾದಿಗಳು ತಮ್ಮಂತೆ ಅವಳಿಗೊಂದು ಸ್ವತಂತ್ರ ಸ್ಥಾನಮಾನ ವ್ಯಕ್ತಿತ್ವವಿದೆ ಎಂದು ಅದನ್ನು ತಾನು ರಕ್ಷಿಸಬೇಕೆಂದು ಹೇಳುವುದಿಲ್ಲ. ಇಂಥವರಿಗೆ ಹೆದರಿಕೊಂಡು ಇರುವುದರಿಂದಲೇ, ಹೆಣ್ಣಿನ ಕುರಿತು ಸತ್ಯ ಹೇಳುವ ಅವಳನ್ನು ಮನುಷ್ಯರಂತೆ ಕಾಣುವ ಚಿಂತನೆಗಳು ತೀರ ವಿರಳವಾಗಿವೆ.

ಮಹಿಳೆ ಮತ್ತು ಕೋಮುವಾದ: ಆಧುನಿಕ ಭಾರತದ ಅತ್ಯಂತ ಅಪಾಯಕಾರಿ ವಿದ್ಯಮಾನವಾಗಿರುವ ‘ಕೋಮುವಾದ’ವು ಸಂಸ್ಕೃತಿಯ ಬಹುಮುಖಿತ್ವವನ್ನು ತಿರಸ್ಕರಿಸಿ, ಸನಾತನ ಏಕಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಹಾಗೆ ಪ್ರತಿಪಾದಿಸಲು, ಪ್ರತಿಷ್ಠಾಪಿಸಲು ರೂಪುಗೊಳ್ಳುತ್ತಿರುವ ಒಂದು ತಾತ್ವಿಕ ಚಚರ್ೆಯಾಗಿದೆ. ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತಿರುವ ಪ್ರಜಾಸತ್ತಾತ್ಮಕ ಆಲೋಚನಾ ಕ್ರಮ ಮತ್ತು ಸೌಹಾರ್ದನೆಲೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ, ಪೂವರ್ಾಗ್ರಹಪೀಡಿತವಾದ ವಾದ ಸರಣಿಯನ್ನೆ ಮುಂದಿಡುತ್ತದೆ. ಹಿಂದೂ ಸಂಸ್ಕೃತಿ, ಇಸ್ಲಾಂ ಸಂಸ್ಕೃತಿ, ಸಾಂಸ್ಕೃತಿಕ ಪಾವಿತ್ರ್ಯತೆ, ದೇಶಾಭಿಮಾನ, ಭಾರತೀಯ ಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಸಂಕುಚಿತಗೊಳಿಸಿ, ಅದಕ್ಕೆ ಭಾವನಾತ್ಮಕ ಚೌಕಟ್ಟನ್ನು ಕೊಡುತ್ತದೆ.
ಹಿರಿಯ ಚಿಂತಕ ಐಜಾಜ್ ಅಹ್ಮದ್ ಹೇಳುವಂತೆ, ಕೋಮುವಾದವು ಊಳಿಗಮಾನ್ಯ-ವಸಾಹತುಶಾಹಿ ಹಿನ್ನೆಲೆಯ ಮತ್ತು ಬಂಡವಾಳಶಾಹಿ ಬೆಳವಣಿಗೆಯ ಒಂದು ನಿದರ್ಿಷ್ಟ ಹಂತದಲ್ಲಿರುವ ಸಮಾಜವೊಂದರ ರಾಜಕಾರಣದ ಅವಿಭಾಜ್ಯ ಅಂಗ.
ಇನ್ನೋರ್ವ ಸಮಾಜ ಚಿಂತಕ ಕೆ.ಎನ್.ಫಣಿಕ್ಕರ್ ಗುರುತಿಸಿದಂತೆ, ಇಂದು ಕೋಮುವಾದವು ಸಾಮಾಜಿಕ-ರಾಜಕೀಯ ವಲಯಗಳಲ್ಲಿ ಹರಡಿಕೊಂಡಿದ್ದು. ಅದು ಎರಡು ಪರಸ್ಪರ ಸಂಬಂಧವುಳ್ಳ ಕೇಂದ್ರ ಅಂಶಗಳ ಮೇಲೆ ಅವಲಂಬಿಸಿದೆ. ಮೊದಲನೇಯದು ಒಂದು ಸಮಾಜದಲ್ಲಿರುವ ಮತೀಯ ಪ್ರಜ್ಞೆಯಾದರೆ ಎರಡನೇಯದು ರಾಜಕೀಯ ಲಾಭಕ್ಕಾಗಿ ಕೋಮುವಾದವನ್ನು ಶಸ್ತ್ರವನ್ನಾಗಿ ಬಳಸುವುದು.
ಕೋಮುವಾದ ಮತ್ತು ಮತೀಯವಾದದ ಉಗಮ ಮತ್ತು ಬೆಳವಣಿಗೆಯನ್ನು ಸದ್ಯದ ಆಥರ್ಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಹಿನ್ನೆಯಲ್ಲಿ ಅರ್ಥಮಾಡಿಕೊಳ್ಳುವುದು ಹೆಚ್ಚು ಸೂಕ್ತವಾದುದು. ಆಳುವ ವರ್ಗವು ಅನುಸರಿಸುವ ನೀತಿಗೂ ಮತ್ತು ಕೋಮುವಾದ ಹುಟ್ಟಿಸುವ ಹಿಂಸೆಗೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕಾಗಿದೆ.
– ಶೋಷಕ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಜನರನ್ನು ಮತ-ಧರ್ಮದ ಆದಾರದಲ್ಲಿ ಯಾವ ರಾಜೀಯ ಸಿದ್ಧಾಂತವು ವಿಭಜಿಸುತ್ತದೋ ಅದು ಪ್ರತಿಗಾಮಿಯಾಗಿರುತ್ತದೆ.
– ಯಾವತ್ತು ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯು ಎಲ್ಲಾ ಬಗೆಯ ವಿಚ್ಛಿದ್ರಕಾರಕ ಶಕ್ತಿಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಇದರಲ್ಲಿ ಕೋಮುವಾದ ಸಮರ್ಥ ಅಸ್ತ್ರವಾಗಿದೆ. ಸಂಸದೀಯ ಪ್ರಜಾಸತ್ತೆ ತರಲು ಕಾರಣವಾದ ಬಂಡಾವಾಳಶಾಹಿಯು ಇಂದು ಆ ಆಶಯಗಳನ್ನು ದುರ್ಬಲಗೊಳಿಸಿ, ಸವರ್ಾಧಿಕಾರ ತರಲು ಪ್ರಯತ್ನಿಸುತ್ತಿದೆ. ಕೋಮುವಾದಿ ವೈಚಾರಿಕತೆಯು ಜನಾಂಗೀಯ ಸವರ್ಾಧಿಕಾರವನ್ನು ಆಯ್ದುಕೊಳ್ಳುತ್ತದೆ. ಭಾರತದ ಕೋಮುವಾದಿಗಳು ಹಿಂದುತ್ವದ ಶ್ರೇಷ್ಠತೆಯನ್ನು ಸಾಧಿಸಲು ರಾಜಕೀಯ ಪ್ರಭುತ್ವದ ಕಡೆ ಮುಖ ಮಾಡಿವೆ.
– ಕೋಮುವಾದಿಗಳು ಸುಲಭವಾಗಿ ಬಳಸುವುದು ಭಾವನಾತ್ಮಕ ವಿಷಯಗಳನ್ನೇ. ಉದಾ: ರಾಮಮಂದಿರ ನಿಮರ್ಾಣ, ಭಯೋತ್ಪಾದನೆ, ಪಾಕಿಸ್ತಾನದ ವಿಷಯ, ಬಲವಂತದ ಸಮಾನ ನಾಗರಿಕ ಸಂಹಿತೆ, ಇತ್ತೀಚೆಗೆ ಸಾಚಾರ ಸಮಿತಿ ವರದಿಯ ವಿರುದ್ಧದ ಆರೋಪ, ಹಿಂದುತ್ವ, ಮೂಢನಂಬಿಕೆಗಳ ಪ್ರಚಾರ, ದೇವರು-ಧರ್ಮ, ಹೀಗೆ ಕೋಮುವಾದಿ ರಾಜಕೀಯ ಸಿದ್ಧಾಂತವು ಜನರ ಭಾವನೆಗಳನ್ನೇ ಪ್ರಧಾನ ಬಂಡವಾಳವಾಗಿಸಿಕೊಳ್ಳುತ್ತದೆ. ಇದಕ್ಕೆ ಮಾನವೀಯ ಮುಖವೇ ಇಲ್ಲ.
– ಕೋಮುವಾದವು ಭಾರತದ ಬಹುಸಂಸ್ಕೃತಿಯನ್ನು ನಿರಾಕರಿಸುತ್ತದೆ. ಹಿಂದೂ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಹೇರುತ್ತದೆ. ಹೀಗೆ ಹೇರುವಾಗ ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಧರ್ಮಗಳು ಹಿಂದುತ್ವದ ಅಡಿಯಾಳಾಗಿರಬೇಕೆಂದೂ ಹೇಳುತ್ತದೆ. ಒಟ್ಟಿನಲ್ಲಿ ಕೋಮುವಾದ ಪ್ರಜಾಪ್ರಭುತ್ವದ ವಿರೋದಿಯಾಗಿದೆ.
– ಜಾಗತಿಕರಣ ಮತ್ತು ಉದಾರಿಕರಣದ ಕುರಿತು ಬೆಳೆಯುತ್ತಿರುವ ವ್ಯಾಪಕ ಅಸಂತೃಪ್ತಿ ಮತ್ತು ಅಸಮಾನತೆ ಹಾಗೂ ನಿರುದ್ಯೋಗ ಅಪಾಯಕಾರಿಯಾಗಿ ಬೆಳೆದಿವೆ. ಇದರಿಂದ ಕೋಮುವಾದಿ-ವಿಚ್ಛಿದ್ರಕಾರಿ ಶಕ್ತಿಗಳಿಗೆ ಸಕರ್ಾರದ ತಪ್ಪು ಆಥರ್ಿಕ ನೀತಿಗಳು ಫಲವತ್ತಾದ ಭೂಮಿಕೆಯನ್ನು ಸಿದ್ಧಪಡಿಸಿದಂತಾಗಿದೆ.
– ಕೋಮುವಾದ-ಭಯೋತ್ಪಾದನೆ- ಮೂಲಭೂತವಾದ ಇವು ಪರಸ್ಪರರನ್ನು ಬೆಳೆಸುತ್ತವೆ: ಪೋಷಿಸುತ್ತವೆ. ಆದರೆ ಈ ಮೂರು ವಿಷಯಗಳ ವಿರುದ್ಧವೂ ಜಾಗೃತರಾಗಿರಬೇಕಾದುದು ದುಡಿಯುವ ವರ್ಗದ ಪ್ರಧಾನ ಕೆಲಸವಾಗಬೇಕು. ಏಕೆಂದರೆ ಈ ಎರಡು ದಶಕಗಳಲ್ಲಿ ಆರ್.ಎಸ್.ಎಸ್.ನ ರಾಜಕೀಯ ಮುಖವಾಡ ಬಿ.ಜೆ.ಪಿ.ಯ ಮಾನವ ವಿರೋಧಿ ತಂತ್ರಗಾರಿಕೆ ಜಗಜ್ಜಾಹೀರಾಗಿದೆ. ಉದಾ: 1990ರ ರಥಯಾತ್ರೆಯ ಸಂದರ್ಭದಲ್ಲಿ ಅಹಮದಾಬಾದ್ನಲ್ಲಿ ಭಾರೀ ಹಿಂಸಾಚಾರ ನಡೆಸಲಾಯಿತು, ತದ ನಂತರ ಗುಜರಾತಿನಲ್ಲಿ ಹರಿಬಿಟ್ಟ ನರಮೇಧವು ಆಕ್ರಮಣಕಾರಿ ಕೋಮುವಾದಿ ಸಿದ್ಧಾಂತದ ತುತ್ತತುದಿಯಾದ ಫ್ಯಾಸಿಸ್ಟ ದಬ್ಬಾಳಿಕೆಯಾಗಿತ್ತು. ಓರಿಸ್ಸಾದಲ್ಲಿ ಚುನಾವಣೆ ಸಮೀಪಿಸಿದಾಗ 2008ರಲ್ಲಿ ನಡೆಸಲಾದ ವ್ಯಾಪಕ ಕೋಮುಹಿಂಸಾಚಾರ, ಅದಕ್ಕೂ ಮೊದಲು ಗ್ರಹಾಂಸ್ಟ್ಯೆನ್ನ ಜೀವಂತ ದಹನ, ಕನರ್ಾಟಕದಲ್ಲಿ ಅಧಿಕಾರಕ್ಕೆ ಏರುವ ಮುನ್ನ ಮತ್ತು ನಂತರ ವಿವಿಧೆಡೆ ನಡೆಸಿದ ಚಚರ್ು-ಮಸೀದಿಗಳ ಮೇಲಿನ ದಾಳಿ, ಅನ್ಯಧಮರ್ೀಯರನ್ನು ಮದುವೆಯಾಗದಂತೆ, ಮಾತಾಡದಂತೆ ಮಾಡುವ ಅಪರಾಧಿಕ ಆಕ್ರಮಣಗಳು ನಡೆದಿವೆ. ಮಹಾರಾಷ್ಟ್ರವನ್ನು ತಲ್ಲಣಗೊಳಿಸಿದ 1992-93ರ ಘಟನಾವಳಿಗಳ ನಂತರ ಇಂದಿಗೂ ಕೋಮುಹಿಂಸಾಚಾರದ ಮುಂದುವರಿಕೆ, ಮಧ್ಯಪ್ರದೇಶದ ಆದಿವಾಸಿ ಪ್ರದೇಶದ ಕ್ರಿಶ್ಚಿಯನ್ರ ಮೇಲೆ ಹಿಂಸಾತ್ಮಕ ದಾಳಿ, ಓರಿಸ್ಸಾದಲ್ಲಿ ಮತಾಂತರಗೊಂಡ ದಲಿತರು ಪುನಃ ಹಿಂದೂಧರ್ಮಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಏಳು ದಲಿತ ಮಹಿಳೆಯರ ತಲೆ ಬೋಳಿಸಿದ್ದು, ಗುಜರಾತಿನಲ್ಲಿ ಗಭರ್ಿಣಿ ಸ್ತ್ರೀಯ ಹೊಟ್ಟೆಯನ್ನು ತ್ರಿಶೂಲದಿಂದ ಸೀಳಿ, ಬ್ರೂಣವನ್ನು ಬೆಂಕಿಗೆ ಎಸೆದದ್ದು ಹೀಗೆ ಕೋಮುವಾದದ ನೀಚ ಕೃತ್ಯಗಳು ಹೆಚ್ಚುತ್ತಲೇ ಇವೆ. ಈಬಾರಿ ಅಧಿಕಾರಕ್ಕೆ ಬಂದ ನಂತರ ‘ಘರ್ ವಾಪಸಿ’ ಎಂಬ ಹೆಸರಿನಲ್ಲಿ ಮರುಮತಾಂತರ ಕ್ರಿಯೆಗಳು.
– ಸಾಂಸ್ಕೃತಿಕ ರಂಗದಲ್ಲಿ ಪ್ರಗತಿಪರ ಸಿನೇಮಾ, ನಾಟಕ, ಚಿತ್ರಕಲಾವಿದರ ಮೇಲೆ ಕ್ರೀಡಾಪಟುಗಳ ಮೇಲೆ ದೈಹಿಕ ದಾಳಿ ನಡೆಸಿದ್ದೂ ಇದೆ.

ದುಡಿಯುವ ಜನರ ಮೇಲೆ ಕೋಮುವಾದದ ಅಪಾಯಗಳು.
– ಭಾರತದ ಸವರ್ಾಂಗೀಣ ಪ್ರಗತಿಗೆ, ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಅತ್ಯಂತ ಕಂಟಕಪ್ರಾಯವಾದುದು ಈ ಕೋಮುವಾದ. ಇದು ಸೌಹಾರ್ದತೆ ಮತ್ತು ಜನತೆಯ ಐಕ್ಯತೆಯನ್ನು ಛಿದ್ರಗೊಳಿಸುತ್ತದೆ. ದುಡಿಯುವ ವರ್ಗದ ವಿಭಿನ್ನ ವಿಭಾಗಗಳಲ್ಲಿ ಕೋಮುವಿಷಬೀಜ ನುಸುಳುತ್ತಿದೆ.
– ಕೋಮುವಾದ-ಜಾತಿವಾದ-ಮುಲಭೂತವಾದ ಮತ್ತು ಭಯೋತ್ಪಾನೆಗಳು ಸಮಾಜದ ಧನಾತ್ಮಕ ವಿಕಾಸವನ್ನು ತಡೆಯುವುದರಲ್ಲಿ ತೊಡಗಿಕೊಂಡಿರುತ್ತವೆ.
– ಭಾರತದ ಪ್ರತಿಯೊಂದು ಸಮಸ್ಯೆಗೂ ಅಲ್ಪಸಂಖ್ಯಾರೇ ಕಾರಣವೆಂದು, ಮುಸ್ಲಿಂರನ್ನು ಖಳನಾಯಕರನ್ನಾಗಿ ಚಿತ್ರಿಸಲಾಗುತ್ತದೆ. ಇತಿಹಾಸದ ಸತ್ಯಾಂಶಗಳನ್ನು ಸಮತೋಲನವನ್ನು ಮುರಿದು, ತಿರುಚಿದ ಇತಿಹಾಸ ಬರೆದು, ಅನ್ಯಧಾಮರ್ಿಕತೆಯ ಕುರಿತು ದ್ವೇಷ ಹುಟ್ಟಿಸಲು ಪ್ರಾಥಮಿಕ ಶಾಲೆ ಹಂತದಲ್ಲೇ ಮುಂದಾಗುತ್ತದೆ. ಉದಾ: ಬಿ.ಜಿ.ಪಿ. ನೇತೃತ್ವದ ಎನ್.ಡಿ.ಎ.ಕೂಟ ಈ ಹಿಂದೆ ಕೇಂದ್ರ ಸಕರ್ಾರ ನಡೆಸಿದಾಗ ಪ್ರಾಥಮಿಕ ಶಾಲೆಗಳಲ್ಲಿ ವಿಷಯುಕ್ತ ವಿಚಾರಗಳ ಪಠ್ಯಕ್ರಮ ಸೇರಿಸಿದ್ದನ್ನು ನೋಡಿದ್ದೇವೆ. ಈಗಲೂ ಅದೇ ಕೆಲಸ ಮುಂದುವರಿದಿದೆ.
– ಕೋಮುವಾದವು ಮಹಿಳೆಯರನ್ನು ಸ್ವತಂತ್ರ ನಾಗರಿಕರಾಗಿ ಬದುಕಲು ಬಿಡದು ಮಾತ್ರವಲ್ಲ ದುಡಿಯುವ ಹಕ್ಕನ್ನು ಕೇಳದಂತೆ, ದುಡಿತಕ್ಕೆ ಪ್ರತಿಫಲ ಕೇಳದಂತೆ ಮಾಡುತ್ತದೆ.
– ಸಾಮಾಜಿಕ ಪ್ರಗತಿಗಾಗಿ ಮತ-ಧರ್ಮ, ವರ್ಗಭೇದ ಮರೆತು ಒಂದಾಗಿ ಕೆಲಸ ಮಾಡುವ ದುಡಿಯುವ ಮಹಿಳೆಯರಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕುತ್ತದೆ. ಸಾಮಾನ್ಯ ಮಹಿಳೆ ಮತ್ತು ದುಡಿಯುವ ಮಹಿಳೆಯರಲ್ಲಿ ಕೋಮುವಾದದ ಛಿದ್ರಕಾರಿ ಅಂಶಗಳಾದ ಕಂದಾಚಾರ, ಮೂಢನಂಬಿಕೆ, ಸಾಮೂಹಿಕ ಮಂತ್ರ ಪಠಣ, ಇತ್ಯಾದಿ ಮಾಡಿಸುತ್ತದೆ.
– ಇಡೀ ಮಹಿಳಾ ಸಮುದಾಯವು ತನ್ನ ಶೋಷಣೆಯ ಬೇಡಿ ಕಳಚಿಕೊಳ್ಳಲು ನಡೆಸುತ್ತಿರುವ ಆಂದೋಲನ ಪೂರ್ಣಗೊಳ್ಳದಂತೆ, ಐಕ್ಯಚಳುವಳಿಗೆ ಅಡ್ಡಗಾಲು ಹಾಕುತ್ತದೆ. ದೇವರು, ಧಾಮರ್ಿಕತೆ ಹೆಸರಿನಲ್ಲಿ ಆತ್ಮಸ್ಥೈರ್ಯದ ಹೋರಾಟವನ್ನು ಮೊಟಕುಗೊಳಿಸುತ್ತದೆ. ಒಟ್ಟಾರೆ ಕೋಮುವಾದದ ವೈಚಾರಿಕ ದಾಳಿ ಎಲ್ಲಾ ಮಹಿಳೆಯರನ್ನು ಬಲಿತೆಗೆದುಕೊಳ್ಳುತ್ತದೆ. ಇದರಿಂದ ದುಡಿಯುವ ಮಹಿಳೆಯರು ಹೊರತಲ್ಲ.
– ಕೋಮುವಾದದ ಅಮಲಿನಲ್ಲಿರುವವರಿಂದ ನಾಗರಿಕ ಸಮಾಜದ ಮೇಲೆ ಹಿಂಸೆ, ಅತ್ಯಾಚಾರ, ಕೊಲೆಪಾತಕ ಸಂಭವಿಸುತ್ತದೆ. ಈ ದೊಂಬಿಯ ಪ್ರತಿಫಲವಾಗಿ ಅನಾವಶ್ಯಕ ಬಂದ್ಗಳುಂಟಾಗುತ್ತವೆ. ಮನೆ, ಆಸ್ತಿ-ಪಾಸ್ತಿ, ಬಟ್ಟೆ, ನೀರು ಬಂಧು ಬಳಗ ಕಳಕೊಂಡು ಬೀದಿಪಾಲಾಗುವ ಜನೆತೆಯ ರಕ್ಷಣೆಗೆ ಯಾರೂ ಬರುವುದಿಲ್ಲ.
– ಧಾಮರ್ಿಕ ಅಲ್ಪಸಂಖ್ಯಾತ ಕಾರ್ಮಿಕರನ್ನು ಸಂಘಪರಿವಾರದ ಕಾಮರ್ಿಕ ಸಂಘಟನೆಗಳು ಸಂಶಯದ ದೃಷ್ಠಿಯಿಂದ ನೋಡುವಂತೆ ಮಾಡುತ್ತವೆ ಮತ್ತು ನಿರಂತರ ಅಪಪ್ರಚಾರದಲ್ಲಿ ತೊಡಗಿವೆ. ಧಾಮರ್ಿಕ ಅಲ್ಪಸಂಖ್ಯಾತ ದುಡಿಯುವ ಮಹಿಳೆಯರ ಕುರಿತು ತುಚ್ಛವಾಗಿ ಕಾಣುತ್ತದೆ. ಕೋಮುವಾದದ ಭಾವನಾತ್ಮಕ ಅಂಶವು ಕಾಮರ್ಿಕ ಕುಟುಂಬದಲ್ಲಿ ಪ್ರತಿಬಿಂಬಿತವಾಗುತ್ತದೆ. ಅದರ ಅಪಾಯ ದುಡಿಯುವ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಆಗುತ್ತದೆ.
– ತತ್ಪರಹಿತ-ಅವಕಾಶವಾದಿ ಕೋಮುವಾದಿ ರಾಜಕೀಯಕ್ಕೆ ಚುನಾವಣೆಯಲ್ಲಿ ಅಲ್ಪಸ್ವಲ್ಪ ಹಿನ್ನಡೆಯಾದರೂ, ಅದರ ಪ್ರಭಾವ, ವಿಷಪೂರಿತ ವಿಚಾರಗಳು ಜನಮನದಲ್ಲಿ ಉಳಿಯುತ್ತದೆ. ಅದು ಅಲ್ಲಲ್ಲಿ ಕೋಮುಗಲಭೆ, ಜನಾಂಗೀಯ ಕಲಹಗಳಾದಾಗ ಸ್ಪೋಟಗೊಂಡು ಮತ್ತೆ ಅಧಿಕಾರಕ್ಕೇರಲು ಹಪಹಪಿಸುತ್ತದೆ.

ಇಂದು ಭಾರತದ ಪ್ರಜಾಸತ್ತೆಗೆ ಅಪಾಯ ತಂದೊಡ್ಡುವ ಕೋಮುವಾದವು ಭಾರತದ ಪ್ರಭುತ್ವವನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಿರುವುದು ಮತ್ತು ಅಂತಿಮವಾಗಿ ಫ್ಯಾಸಿಸ್ಟ ಸ್ವರೂಪಕ್ಕೆ ತಲುಪುವ ಮುನ್ಸೂಚನೆಯನ್ನು ಇತ್ತೀಚೆಗೆ ಕಾಣಬಹುದಾಗಿದೆ.
ಯಾವುದೇ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಾಗ ಅದರ ಮೊದಲ ಪರಿಣಾಮ ವಾಗುವುದು ಹೆಣ್ಣಿನ ಮೇಲೆ. ಇದಕ್ಕೆ ಮೊದಲ ಕಾರಣ ಘರ್ಷಣೇಗೆ ತೊಡಗುವ ಗಂಡಸರು ಹೆಂಗಸರ ಕುರಿತು ತಳೆದಿರುವ ಧೋರಣೆಯೇ ಆಗಿದೆ. ಅವರು ಹೆಣ್ಣನ್ನು ಸಹಜೀವಿ ಎಂದು ಭಾವಿಸದೇ ಶತ್ರುವಿನ ಆಸ್ತಿ ಎಂದು ಪರಿಗಣಿಸಿರುವುದರಿಂದ ಅವನನ್ನು ಅಥವಾ ಅವನನ್ನು ಪ್ರತಿನಿಧಿಸುವ ಧರ್ಮವನ್ನು ಮಣಿಸಲು ಹೆಂಗಸರನ್ನು ಅಪಹರಿಸುವ, ಅತ್ಯಾಚಾರ ಮಾಡುವ, ಕೊಲ್ಲುವ ಮೂಲಕ ಸೇಡು ತೀರಿಸಿಕೊಳ್ಳುವುದನ್ನು ಪೌರುಷ ಎಂಧು ಭಾವಿಸುತ್ತಾರೆ. ಆದರದು ಹೇಡಿತನ ಎಂಬುದನ್ನು ತಿಳಿಯದಷ್ಟು ಹೇಡಿಗಳು ಅವರಾಗಿರುತ್ತಾರೆ.
ಅಲ್ಲದೇ ಈ ಗಲಭೆಗಳ ಪರಿಣಾಮವಾಗಿ ಹೆಂಗಸರು ಮುಕ್ತವಾಗಿ ಓಡಾಡದ, ವಿದ್ಯಾಭ್ಯಾಸ, ಉದ್ಯೋಗಗಳಿಂದ ವಂಚಿತರಾಗುವ ಸಮಸ್ಯೆ ಎದುರಾಗುತ್ತದೆ. ತಾಲಿಬಾನ್ ನಿಯಂತ್ರಣ ಸಾಧಿಸಿದಾಗ ಹೆಂಗಸರು ಹಾಡು ಹೇಳದಂತೆ, ಕೇಳದಂತೆ ಹೊರಹೋಗದಂತೆ, ಶಿಕ್ಷಣ ಪಡೆಯದಂತೆ ಇನ್ನೂ ಅನೇಕ ನಿರ್ಬಂಧ ಹೇರಿದ್ದನ್ನು ಗಮನಿಸಬಹುದು. ಇದಲ್ಲದೇ ಹೆಣ್ಣನ್ನು ಧರ್ಮದ ಅಸ್ತ್ರವಾಗಿ ಕೂಡ ಬಳಸುವುದನ್ನು ಕಾಣಬಹುದು. ಇತ್ತೀಚಿನ ಹೇಳಿಕೆಗಳನ್ನೇ ಗಮನಿಸಿ; ಹಿಂದೂ ಧರ್ಮ ಬೆಳೆಯುವುದಕ್ಕಾಗಿ ಹಿಂದೂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಅಪ್ಪಣೆ ಕೊಡಲಾಯಿತು. ಇದಕ್ಕೆ ಅವಳ ಒಪ್ಪಿಗೆಯ ಅವಶ್ಯಕತೆಯೇ ಅವರಿಗೆ ಕಾಣಲಿಲ್ಲ.
ಎರಡು ದೇಶಗಳ ಘರ್ಷಣೆಗಳಲ್ಲಿ ಅದೂ ಧಮರ್ಾಧಾರಿತವಾದಾಗ ಹೆಣ್ಣಿನ ದೇಹವನ್ನು ಆಕ್ರಮಿತ ಭೂಮಿ ಎಂಬಂತೆ ನಡೆಸಿಕೊಂಡು ಧಾಳಿ ಮಾಡಲಾಗುತ್ತದೆ. ಉದಾ: ಬಾಂಗ್ಲಾ ದೇಶದ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಯಿತು. ಸಾವಿರಾರು ಅನಾಥ ಮಕ್ಕಳು ಜನಿಸಿದ್ದನ್ನು ನೋಡಬಹುದಾಗಿದೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಹಿಟ್ಲರ್ ಪಡೆಯು ಮಹಿಳೆಯರ ಅಂಗಾಂಗಗಳನ್ನು ಕತ್ತರಿಸಿ ನೇತುಹಾಕಿತು.  ಭಾರತ – ಪಾಕಿಸ್ತಾನ, ಪ್ಯಾಲಿಷ್ಟೈನ್-ಇಸ್ರಾಯಿಲ್ ಇತ್ಯಾದಿ ದೇಶಗಳಲ್ಲಿ ಯುದ್ಧಗಳಾದಾಗಲೂ ಇದೇ ಕತೆ. ನಮ್ಮ ದೇಶದೊಳಗೂ ಗುಜರಾತ್ ಗೋದ್ರಾ ಘಟನೆ ಹಿನ್ನೆಲೆಯಲ್ಲಿ ನಡೆದ ನರಮೇಧದಲ್ಲಿ ಗಭರ್ಿಣಿ ಮಹಿಳೆಯ ಭ್ರೂಣ ಸುಟ್ಟ ಘಟನೆ, ವಣರ್ಾಶ್ರಮ ಧರ್ಮದ ಪ್ರತೀಕವಾಗಿ ದಲಿತರನ್ನು ದಲಿತ ಮಹಿಳೆಯರ ಬೆತ್ತಲೆ ಮೆರವಣಿಗೆ, ಬಹಿಷ್ಕಾರ, ಕೊಲೆ, ಗುಡಿಸಿಗೆ ಬೆಂಕಿ ಹಚ್ಚುವುದು, ಸಜೀವ ದಹನದಂಥ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ.
ಹಾಗಾದರೆ ಸಾಮಾನ್ಯ ಮಹಿಳೆಯರಿಗೆ ಮತ್ತು ದುಡಿಯುವ ಮಹಿಳೆಯರಿಗೆ  ಭದ್ರತೆಯ ನೆಲೆ ಯಾವುದು? ಇಂದು ಮಹಿಳೆಯರು ಕೆಲಸ ಹುಡುಕಿಕೊಂಡು ದೇಶ-ವಿದೇಶಗಳಿಗೆ ಹೋಗುತ್ತಿದ್ದಾರೆ.  ಜನವಸತಿ ಇರಲಿ ಬಿಡಲಿ ಎಲ್ಲಾ ವಿಧದ ಕೆಲಸದ ಸ್ಥಳಗಳು, ತೋಟ, ಹೊಲ-ಗದ್ದೆ, ಮಂಡಿಗಳು, ಕೃಷಿ ಬಜಾರುಗಳು, ಮಾರುಕಟ್ಟೆ ಪ್ರದೇಶಗಳು, ಶಾಲೆ, ಕಾಲೇಜು, ಪ್ರಯಾಣದ ಸ್ಥಳಗಳಾದ ರೈಲು, ಬಸ್ಸು, ಕಾರು ಇತರೇ ವಾಹನಗಳಲ್ಲಿ, ಸ್ವಂತ ಕುಟುಂಬದಲ್ಲಿ, ಮದುವೆಯಾಗಿ ಸೇರಿಸ ಮನೆತನದಲ್ಲಿ, ಸಕರ್ಾರಿ ಆವರಣದಲ್ಲಿ ಹೀಗೆ ಎಲ್ಲಿ ದುಬರ್ೀನು ಹಿಡಿದರೂ ಅವಳಿಗೆ ಭದ್ರತೆಯ ತಾಣವಿಲ್ಲ.  ‘ಯಾರ ಬರುವಿಗೆ ಉದುರು ನೋಡುವೆ? ಯಾರ ರಕ್ಷಣೆಗೆ ನೀನು ಕಾಯುವೆ? ಶಾಸನ-ಕೋಟರ್ು-ಕಛೇರಿ ಎಲ್ಲಾ ಕನ್ನಡಿಯೊಳಗಿನ ಗಂಟಿನಂತೆ’ ಭದ್ರತೆ ಎಲ್ಲಿ ಸಿಗುತ್ತದೆ? ಅದೊಂದು ಸಮಾಜದ ಎಚ್ಚೆತ್ತ ಪ್ರಜ್ಞೆಯ ಭಾಗವಾಗಿ ಮೂಡಬೇಕಾದುದು. ನೆರೆಹೊರೆಯವರಲ್ಲಿ ಹೆಣ್ಣಿನ ಬಗೆಗಿನ ಕಡೆಗಣ್ಣ ನೋಟದಲ್ಲಿ ಆಗಬೇಕಾದ ಬದಲಾವಣೆಯ ಭಾಗವಾಗಿ ‘ಮಹಿಳಾ ಭದ್ರತೆ’ ಇದೆ.
ಲೈಂಗಿಕ ಪ್ರವಾಸೋದ್ಯಮ, ಲೈಂಗಿಕ ರಾಜಕಾರಣ ಅಸಹ್ಯ ಹುಟ್ಟಿಸುವ ಸಂಗತಿಗಳು. ಅದರ ಭಾಗವಾಗಿ ಹೆಣ್ಣುಗಳ-ಮಕ್ಕಳ ಮಾರಾಟ ಜಾಲವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸುಂದರ ಹೆಣ್ಣು ಮಕ್ಕಳನ್ನು -ಅವರ ಆಥರ್ಿಕ ಅಭದ್ರತೆಯನ್ನೇ ಬಂಡವಾಳವಾಗಿಸಿ- ಖರೀದಿಸಿ ತಮ್ಮ ಕಣ್ಣೋಟಕ್ಕೆ ಹೇಗೆ ಬೇಕೋ ಹಾಗೆ ನಗ್ನ-ಅರೆ ನಗ್ನವಾಗಿ ಚಿತ್ರೀಕರಿಸಿಕೊಂಡು  ಮಾಧ್ಯಮಗಳಲ್ಲಿ ಹಾಗೂ ಸಿನೇಮಾಗಳಲ್ಲಿ,  ಹಣಕಾಸು ವ್ಯವಹಾರ ಕುದುರುತ್ತಿರುವುದು ಆಘಾತಕಾರಿ ಬೆಳವಣಿಗೆ. ಇಲ್ಲಿ ಎಂತೆಂಥ ಮನಸ್ಸುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಸಮಾಜದ ರಚನಾವಿಧಾನದ ಹಾಗೂ ಸಮಾಜದ ಬೆಳವಣಿಗೆ ಕಾಲಘಟ್ಟದಲ್ಲಿ ಸ್ತ್ರೀಯರ ಕುರಿತು ಯಾವ ಮೌಲ್ಯಗಳನ್ನು ಬಿತ್ತಲಾಗಿದೆಯೋ ಅದರ ಭಾಗವಾಗಿಯೇ ಇಂದಿಗೂ ಸಮಾನತೆಯ ವಿಷಯ ಹೇಳಿದರೆ ಮುಗಿಬೀಳುವವರ ಸಂಖ್ಯೆಯೇ ಹೆಚ್ಚು. ಹೆಣ್ಣನ್ನು ಮನುಷ್ಯನೆಂದು ಪರಿಗಣಿಸದ ಲಿಂಗ ಅಸಮಾನತೆ, ಹೆಣ್ಣಿಗೂ ಎಲ್ಲರಂತೆ ಇರುವ ಭಾವನೆ-ಶ್ರದ್ಧೆಯನ್ನು ಗೌರವಿಸದ ಧಾಮರ್ಿಕ ಅಸಮಾನತೆ, ಸಮಾಜದ ಆಗುಹೋಗುಗಳ ಕುರಿತು ನೀತಿ ನಿರೂಪಿಸಿ ಶಾಸನ ಮಾಡುವವುದನ್ನು ನಿರಾಕರಿಸುವ ರಾಜಕೀಯ ಅಸಮಾನತೆ,  ಸಮಾಜದ ಸವರ್ಾಂಗೀಣ ಬೆಳವಣಿಗೆಗೆ ಹೆಣ್ಣಿನ ಕೊಡುಗೆ ಪಡೆದೂ ಕೂಡ ಪ್ರಗತಿಯಲ್ಲಿ ಹೆಣ್ಣಿನ ದುಡಿಮೆಯನ್ನು ಗೌಣವಾಗಿಸುವ ರಾಜಕೀಯ ಅರ್ಥಶಾಸ್ತ್ರಗಳು ಹಾಗೂ ಸಿದ್ಧಾಂತ ರೂಪಿಸುವಲ್ಲಿಯ ಅಸಮಾನತೆಗಳು, ಸ್ವತಂತ್ರವಾಗಿ, ಗೌರವಯುತವಾಗಿ, ಸಮಾನ ಬದುಕು ಕಟ್ಟಿಕೊಂಡು ಹೋಗಲು ಬೇಕಾಗುವ ಆಥರ್ಿಕ ಸಬಲತೆಯನ್ನು ನಿರಾಕರಿಸುವ ಆಥರ್ಿಕ ಅಸಮಾನತೆಗಳು ಯಾವುದರ ಕೊಡುಗೆ?  ಇದೆಲ್ಲದರ ಹಿಂದೆ ಕೂಡ ಧಾಮರ್ಿಕ ಮೂಲಭೂತವಾದ ಹಾಗೂ ಕೋಮುವಾದದ ಕರಿ ಛಾಯೆಯನ್ನು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ.
ಮಹಿಳೆಯರನ್ನು ಕೇವಲ ಗೃಹಕೃತ್ಯ ಮತ್ತು ಸಂತಾನೋತ್ವತ್ತಿಯ ಭಾಗವಾಗಿ ಮಾತ್ರ ಕಾಣುವ ಕೋಮುವಾದಿ ವಿಚಾರದಿಂದ ದುಡಿಯುವ ಮಹಿಳೆಯರು ತಮ್ಮ ಆಥರ್ಿಕ ಬೇಡಿಕೆಗಳಿಗಾಗಿ ಹೋರಾಡದಂತೆ ಕಟ್ಟಿಹಾಕುತ್ತದೆ. ಆ ಮೂಲಕ ಆಥರ್ಿಕ ಪ್ರಜ್ಞೆಯ ಹೋರಾಟ ಮೊಟಕುಗೊಳ್ಳುತ್ತದೆ. ಕಾಲಾನಂತರದಲ್ಲಿ ಸಮಾಜ ಬದಲಾವಣೆಯ ಕ್ರಾಂತಿಕಾರಿ ಪ್ರಜ್ಞೆ ಉದ್ಭವಿಸದಂತೆ ಪ್ರತಿಹಂತದಲ್ಲಿ ವಿಘ್ನಗಳನ್ನು ತಂದೊಡ್ಡುತ್ತದೆ ಎಂಬುದಂತೂ ಸತ್ಯ.
ಮೂಲಭೂತವಾದ-ಕೋಮುವಾದದ ವಿರುದ್ಧ ಹೋರಾಡಲು ವ್ಯೂಹೋಪಾಯಗಳು.
– ಕೋಮುವಾದವನ್ನು ನಿಯಂತ್ರಣ ಮಾಡಿ, ನಿಮರ್ೂಲನೆಗೆ ಮುಂದಾಗದಿದ್ದರೆ ದೇಶಕ್ಕೆ ಗಂಭೀರ ಅಪಾಯವಂತೂ ಇದೆ ಎನ್ನುವುದು ಸ್ಪಷ್ಟ. ಈ ಕಾರಣಕ್ಕಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ತನ್ನ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸುತ್ತದೆ. ದೇಶದ ಅತ್ಯಂತ ಸಮರಶೀಲ ಕಾಮರ್ಿಕ ಸಂಘಟನೆಯಾದ ಸಿಐಟಿಯುನ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಈ ಸಮಾಜವನ್ನು ವರ್ಗ ದೃಷ್ಠಿಕೋನದಿಂದಲೇ ವಿಶ್ಲೇಷಣೆಗೊಳಪಡಿಸುತ್ತದೆ. ಮುಖ್ಯ ಬೇಡಿಕೆಗಳ ಕುರಿತು ಹೋರಾಡುತ್ತಲೇ ಕೋಮುವಾದದ ವಿರುದ್ಧ ಕೂಡ ಸೆಣಸುವುದು ಕಾಮರ್ಿಕ ಸಂಘಟನೆಗಳ ಪ್ರಮುಖ ಅವಿಭಾಜ್ಯ ಕೆಲಸವಾಗಿದೆ ಎಂದು ನಂಬಿವೆ.
– ಕಾಮರ್ಿಕ ವರ್ಗದ ಪ್ರಮುಖ ವಿಭಾಗವಾದ ದುಡಿಯುವ ಮಹಿಳೆಯರು- ಅಂಗನವಾಡಿ ನೌಕರರು, ಅಕ್ಷರ ದಾಸೋಹ ಅಡುಗೆಯವರು, ಬೀಡಿ ಕಟ್ಟುವವರು, ಗಾಮರ್ೆಂಟ್ಸ ಹಾಗೂ ಇತರೆಡೆ  ಕೈಮಗ್ಗ-ವಿದ್ಯುತ್ ಮಗ್ಗಗಳಲ್ಲಿ ದುಡಿಯುವವರು, ಮಹಿಳಾ ಹಮಾಲಿ ಮತ್ತು ಪೌರ ಕಾಮರ್ಿಕರು, ಆಶಾ ಕಾರ್ಯಕತರ್ೆಯರು, ವಿವಿಧ ಕೈಗಾರಿಕೋದ್ಯಮಗಳಲ್ಲಿ, ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರು, ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವವರು, ಕೋಟರ್ು-ಕಛೇರಿಯಳಲ್ಲಿ ಕೆಲಸ ಮಾಡುವ ಕೇಂದ್ರ ಮತ್ತು ರಾಜ್ಯ ಸಕರ್ಾರಿ ನೌಕರರಲ್ಲಿ   ಜಾತ್ಯತೀತ ಮನೋಭಾವ ಬೆಳೆಸುವ ಕೆಲಸವು ದುಡಿಯುವ ವರ್ಗದ ವರ್ಗ ಹೋರಾಟದ ಜೊತೆಯಲ್ಲೇ ಆಗಬೇಕಾಗುತ್ತದೆ. ಭಾರತದ ಹಳ್ಳಿಗಳ ಜನಸಮುದಾಯದೊಂದಿಗೆ ದಿನನಿತ್ಯದ ಜೀವಂತ ಸಂಬಂಧ ಹೊಂದಿರುವ ಇವರು ಜಾತ್ಯಾತೀತ ವಿಚಾರ ಪ್ರಣಾಳಿಯನ್ನು ಪ್ರಚುರ ಪಡಿಸುವ ಒಂದು ಸಮರ್ಥನೀಯ ವಿಭಾಗವಾಗಿ ಮಾರ್ಪಡಬೇಕಿದೆ. ಸಿಐಟಿಯು ಮಾರ್ಗದರ್ಶನ ಮಾಡಿದಂತೆ, ನಾವು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಗಂಭೀರಹೋರಾಟ ನಡೆಸಿದರೆ ಮಾತ್ರವೇ ಮೂಲಭೂತವಾದ ಹಾಗೂ ಕೋಮುವಾದವನ್ನು ಹಿಮ್ಮೆಟ್ಟಿಸಬಹುದಾಗಿದೆ.
– ನೂರಾರು ವರ್ಷಗಳಿಂದ ಬೇರೂರಿದ ಮೂಲಭೂತವಾದಿ-ಕೋಮುವಾದಿ ಆಲೋಚನೆಯನ್ನು ತಕ್ಷಣದಲ್ಲಿ ಕಿತ್ತೆಸೆಯಲು ಅಸಾಧ್ಯವಾದ್ದರಿಂದ, ವಿಶೇಷವಾದ, ಪರಿಣಾಮಕಾರಿಯಾದ ಮತ್ತು ನಿರಂತರವಾದ ಪ್ರಯತ್ನಗಳನ್ನೇ ಹಾಕಬೇಕಾಗುತ್ತದೆ.
– ದೇಶದ ಹಲವಾರು ಪ್ರಗತಿಪರ ಬಿದ್ಧಿಜೀವಿಗಳು, ಹೋರಾಟಗಾರರು ಗುರುತಿಸಿದಂತೆ ಕೋಮುವಾದದ ನೆಲೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಜನರು ಅದರ ವಿರುದ್ಧ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಂಘಟಿತರಾಗದಿದ್ದರೆ, ಕೋಮುಪೀಡೆಯನ್ನು ಸೃಷ್ಠಿಸುವ ವ್ಯವಸ್ಥೆ ಇನ್ನಷ್ಟು ಬಲಗೊಂಡು ಇನ್ನೂ ಹೆಚ್ಚಿನ ಆಹುತಿಯನ್ನು ತೆಗೆದುಕೊಳ್ಳುತ್ತದೆ. ಅಂಥ ಮಾನಸಿಕ, ಧಾಮರ್ಿಕ ಚೌಕಟ್ಟನ್ನು ರೂಪಿಸಿಕೊಳ್ಳುತ್ತದೆ. ಇದರಿಂದ ನಮ್ಮ ಸಮಾಜದಲ್ಲಿ ಆಗಬೇಕಾಗಿರುವ ಸಾಮಾಜಿಕ, ಆಥರ್ಿಕ ಬೆಳವಣಿಗಳು ಇನ್ನೂ ಮುಂದೂಡಲ್ಪಡುತ್ತವೆ.
– ವಿನಾಶಕಾರಿ ಆಥರ್ಿಕ ನೀತಿಗಳ ವಿರುದ್ಧ, ನಿರುದ್ಯೋಗದ ವಿರುದ್ದ ಹೋರಾಡುತ್ತಲೇ ಕೋಮುವಾದಿ-ಜಾತಿವಾದಿ-ವಿಭಜನಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಅದಕ್ಕಾಗಿ ತಳಮಟ್ಟದ ತನಕ ವ್ಯಾಪಕ ಹೋರಾಟ ನಡೆಸುವುದೊಂದೇ ದಾರಿ.
– ದುಡಿಯುವ ಮಹಿಳೆಯರು ಕೋಮುವಾದದ ಅಪಾಯಗಳ ಕುರಿತು ಸ್ವಯಂಶಿಕ್ಷಣ ಹೊಂದಬೇಕು, ಸಾಹಿತ್ಯ ಅಭ್ಯಾಸ ಮಾಡಬೇಕು, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕೋಮುವಾದಿ ಅಪರಾಧಿಕ ಆಕ್ರಮಣಗಳಿಗೆ ತುತ್ತಾದ, ದಾಳಿಗೊಳಗಾದ ಸಂದರ್ಭಗಳ ತಿಳಿವಳಿಕೆ ಪಡೆಯಬೇಕು. ಗಲಭೆಗ್ರಸ್ತ ಪ್ರದೇಶದಲ್ಲಿ ಪರಿಹಾರಕಾರ್ಯ, ನೆರವು ನೀಡಲು ಮುಂದಾಗಬೇಕು.
– ನಮ್ಮ ಮಕ್ಕಳಿಗೆ ಬೋಧಿಸುವ ಶಿಕ್ಷಣಕ್ಕೆ ಅನ್ವಯವಾಗುವ ಚಿಕ್ಕ ಚಿಕ್ಕ ಪ್ರಗತಿಪರ ಕಥೆ, ಹಾಡು, ಮಕ್ಕಳ ನಾಟಕಗಳನ್ನು ಹೇಳಿಕೊಡುವಂತಾಗಬೇಕು. ಸೌಹಾರ್ದತೆ ಸಾರುವ ಕರಪತ್ರ, ಪೋಷ್ಟರ್ಸ್, ಬೀದಿಬದಿ ಸಭೆಗಳು, ವಿಚಾರ ಸಂಕಿರಣಗಳನ್ನು ನಡೆಸಬೇಕು.
– ಪ್ರತಿಯೊಂದು ಸಭೆ-ಸಮಾರಂಭ, ಹೋರಾಟ ಕಾರ್ಯಕ್ರಮಗಳಲ್ಲಿ ಕೋಮುವಾದದ ಅಪಾಯದ ಕುರಿತು ವಿಚಾರ-ವಿಮಶರ್ೆ ನಡೆಸುವುದು, ಅತ್ಯಂತ ಕೆಳಸ್ತರದಿಂದ ಬಂದ ದುಡಿಯುವ ಮಹಿಳೆಯರನ್ನು ಇಡಿಯಾಗಿ ಎಜ್ಯುಕೇಟ್ ಮಾಡಬೇಕು, ಅವರಿಗೆ ತಿಳಿಯುವ ರೀತಿಯಲ್ಲಿ ಸಂವಾದ-ಸಂವಹನ ನಡೆಸುವುದು. ಭಾರತದ ಜಾತ್ಯತೀತ, ಬಹುಸಂಸ್ಕೃತಿಯ ಉದ್ದೇಶಗಳಿಗೆ ಪ್ರಥಮ ಬದ್ಧತೆಯನ್ನು ಅವರಲ್ಲಿ ಮೂಡಿಸಬೇಕಾದುದು ಮುಖ್ಯ. ನಂತರ
– ದಿನನಿತ್ಯದ ನಮ್ಮ ಚಟುವಟಿಕೆಗಳಿಗೂ ಕೋಮುವಾದಕ್ಕೂ ಇರುವ ಸಂಬಂಧ ಗುರುತಿಸಲು ಮತ್ತು ತಾವು ಕೆಲಸ ಮಾಡುವ ಪ್ರದೇಶದಲ್ಲಿ ಕೋಮುವಾದಿ ಪ್ರಕ್ರಿಯೆ ಗುರುತಿಸಲು ಸಾಧ್ಯವಾಗಬೇಕು.
– ಕೋಮುವಾದದ ವಿರುದ್ಧ ಹೋರಾಟವೆಂದರೆ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಹಾಗೂ ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿನ ಹೋರಾಟವೇ ಆಗಿದೆ.

ಅಂತಿಮವಾಗಿ ಅನಿಸುವುದಿಷ್ಟು: ಕುಟುಂಬದ ಹೊರೆಯನ್ನು ವಾಸ್ತವಿಕವಾಗಿ ಹೊತ್ತು, ಸಾಮಾಜಿಕವಾಗಿ ಮಾನವ ಜನಾಂಗವನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿಯನ್ನು ಜೈವಿಕವಾಗಿಯೂ ಹೊತ್ತವಳು ಮಹಿಳೆ. ತಾಯಿತನ ಎನ್ನುವುದು ಕೇವಲ ಮಹಿಳೆಗೆ ಆರೋಪಿಸಿರುವ ಗುಣವಾಗಿ ಮಾರ್ಪಟ್ಟಿರುವುದು ದೌಭರ್ಾಗ್ಯ. ತಾಯಿತನ ಎನ್ನವುದು ಪರಸ್ಪರರನ್ನು ಪ್ರೀತಿ ಗೌರವದಿಂದ ಕಾಣುವ, ಸಮಾನರೆಂದು ಪರಿಗಣೀಸುವ, ಸ್ಪಂದಿಸುವ, ಒಬ್ಬರಿಗೊಬ್ಬರು ಒದಗುವ ಕ್ರಿಯೆ ಎಂದು ಅಥರ್ೈಸುವುದಾದರೆ ಈ ತಾಯಿತನ ಗಂಡು ಹೆಣ್ಣು ಎರಡರಲ್ಲೂ  ಇರಬೇಕಾದ ಸಮಾನ ಗುಣವಿಶೇಷ. ಆದರೆ ಇಂದು ಲಿಂಗ ರಾಜಕಾರಣ ಎಷ್ಟು ಪ್ರಬಲವಾಗಿ ಬೆಳೆಯುತ್ತಿದೆ ವರ್ಗಗುಣ ಆವರಿಸಿ ಸೂಕ್ಷ್ಮ ಸಂವೇದನೆಯ ತಾಯಿತನ ಮರೆಯಾಗುತ್ತಿದೆ ಎಂಬ ಆತಂಕವಂತೂ ಇದ್ದೇ ಇದೆ. ಇಂಥ ತಾಯಿತನವನ್ನು ಆಥರ್ಿಕ ಕಾರಣಗಳು ಅಪಹರಿಸಿದರೆ ರಾಜಕೀಯ-ಸಾಮಾಜಿಕ ಕಾರಣಗಳು ತಾಯಿತನವನ್ನು ಸಾಯಿಸುತ್ತಿವೆ. ಅದಕ್ಕೆ ಅತಿ ಹೆಚ್ಚು ಕೊಡುಗೆ ಕೊಡುತ್ತಿರುವುದೆಂದರೆ ನವುದಾರವಾದಿ ಆಥರ್ಿಕ ನೀತಿ ಮತ್ತು ಮೂಲಭೂತವಾದ-ಕೋಮುವಾದ-ಭಯೋತ್ಪಾದನೆ-ಧಮರ್ಾಂಧತೆಗಳು. ಇವುಗಳಿಗೆ ತಾಯಿತನವೂ ಇಲ್ಲ, ಮಾನವೀಯ ಮುಖಗಳೂ ಇಲ್ಲ.
 ಯಮುನಾ ಗಾಂವ್ಕರ್, ಉತ್ತರ ಕನ್ನಡ

ಯಕ್ಷಗಾನ ಕೈಪಿಡಿ’ ರಚಿಸಿದ ಕೃಷ್ಣ ಭಂಡಾರಿ ಸೋಂದಾ – – ಡಾ. ವಿಠ್ಠಲ ಭಂಡಾರಿ, ಕೆರೆಕೋಣ

ಸಾಮಾನ್ಯ

‘ಯಕ್ಷಗಾನ ಕೈಪಿಡಿ’ ರಚಿಸಿದ ಕೃಷ್ಣ ಭಂಡಾರಿ ಸೋಂದಾ – – ಡಾ. ವಿಠ್ಠಲ ಭಂಡಾರಿ, ಕೆರೆಕೋಣ

       ಈಗಲೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಜನಪ್ರಿಯವಾದ ಮಾಧ್ಯಮ ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಹವ್ಯಾಸಿ ತಂಡ, ವೃತ್ತಿ ಮೇಳ, ಹರಕೆಯ ಆಟಗಳ ಮೂಲಕ ಯಕ್ಷಗಾನ ಇಂದು ನೋಡುಗರನ್ನು ಪ್ರಭಾವಿಸಿದೆ. ಕಾಲದಿಂದ ಕಾಲಕ್ಕೆ ಹಲವು ಬದಲಾವಣೆಗೆ-ಪಠ್ಯದಲ್ಲಿಯೂ ಪ್ರದರ್ಶನದಲ್ಲಿಯೂ- ತೆರೆದುಕೊಂಡಿದೆ. ಯಕ್ಷಗಾನಕ್ಕೆ ವಿದ್ಯಾವಂತ ವರ್ಗದ ಪ್ರವೇಶದಿಂದಾಗಿ ‘ಮಾತುಗಾರಿಕೆ’ ಇನ್ನಷ್ಟು ಹೆಚ್ಚು ಚುರುಕುಗೊಂಡಿದೆ; ವಿಸ್ತಾರಗೊಂಡಿದೆ. ಕ್ವಚಿತ್ತಾದ ಉದಾಹರಣೆಯನ್ನು ಹೊರತುಪಡಿಸಿದರೆ ಇದು ಬಹುತೇಕ ಸಂದರ್ಭದಲ್ಲಿ ಸಾಂಪ್ರದಾಯಿಕ ಚೌಕಟ್ಟನ್ನು ದಾಟಿ ಹೋದಂತೇನೂ ಅನ್ನಿಸುವುದಿಲ್ಲ. ಆದರೆ ಭಾಗವತಿಕೆ ಕುಣಿತ ಮತ್ತು ಅಭಿನಯಗಳು ಭಿನ್ನ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಮುಖ್ಯ ರಾಗಗಳು, ಮುದ್ರೆಗಳು, ರಂಗಚಲನೆಗಳು ಮರೆಯಾಗಿ ಇತಿಹಾಸದ ಸಂಗತಿಯಾಗುತ್ತಿರುವದನ್ನು ಹಲವು ವಿದ್ವಾಂಸರು ಗುರುತಿಸಿದ್ದಾರೆ. ಈ ಚಹರೆ ಇಂದಿನದು ಮಾತ್ರವಲ್ಲ 1955ರಲ್ಲಿ ‘ಯಕ್ಷಗಾನ ಕೈಪಿಡಿ’ ರಚಿಸಿದ ಕೃಷ್ಣ ಭಂಡಾರಿ ಸೋಂದಾ ಅವರ ಕಲದ್ದೂ ಆಗಿತ್ತು. ….ಕನ್ನಡಿಗರ ಪ್ರಾಚೀನ ಕಲೆಯಾದ ಈ ಯಕ್ಷಗಾನವು ತನ್ನ ವೈಶಿಷ್ಟ್ಯವನ್ನೇ ಕಳೆದುಕೊಳ್ಳತೊಡಗಿ ಕಾಲಾನಂತರದಲ್ಲಿ ಇದರ ಅಸ್ತಿತ್ವಕ್ಕೂ ಲೋಪ ಬರಬಹುದೆಂಬ ಭ್ರಾಂತಿ ಅನೇಕ ಶ್ರದ್ಧಾವಂತ ಯಕ್ಷಗಾನ ಭಕ್ತರಲ್ಲಿ ಉಂಟಾಗತೊಡಗಿತು. ಎನ್ನುವ ಆತಂಕ ಭಂಡಾರಿಯವರನ್ನು ಅಂದು ಕಾಡಿತ್ತು. ಇದರ ಫಲವೇ ಈ ಕೃತಿ ರಚನೆ ಎನ್ನುವುದು ಸ್ಪಷ್ಟವಾಗಿದೆ.
                                                       
ಚಾರಿತ್ರಿಕ ಮಹತ್ವ :
ಸುಮಾರು 1955ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು ಜನಮಾನಸದಿಂದ ದೂರವಾದ ‘ಯಕ್ಷಗಾನ ಕೈಪಿಡಿ’ ಒಂದು ಚಾರಿತ್ರಿಕ ಮಹತ್ವದ ಕೃತಿಯಾಗಿರುವುದರಿಂದ ಬಂಡಾಯ ಪ್ರಕಾಶನ ಇದನ್ನು ಪ್ರಕಟಿಸಲು ಮುಂದಾಗಿದೆ. ನಿದರ್ಿಷ್ಟ ಚಾರಿತ್ರಿಕ ಘಟ್ಟದಲ್ಲಿ ‘ಯಕ್ಷಗಾನ’, ಸಾಹಿತ್ಯಿಕ ಮೌಲ್ಯದ ದೃಷ್ಟಿಯಿಂದ ಹಾಗೂ ರಂಗ ಪ್ರದರ್ಶನದ ದೃಷ್ಟಿಯಿಂದಲೂ ಹೊರಳಿಕೊಳ್ಳುತ್ತಿರುವ ಸಂಧಿಕಾಲವನ್ನು ಇದು ದಾಖಲಿಸುತ್ತದೆ. ಈಗಿತ್ತ ಸಂಗೀತ ನಾಟಕ-ಚಲಚ್ಚಿತ್ರಗಳ ಯುಗಾರಂಭವಾದ ಮೇಲೆ ಅದರ ಥಳುಕು-ಸೆಳಕುಗಳ ಸಂಸರ್ಗ ಈ ಕಲೆಯ ಸೇವಕರಲ್ಲಿಯೂ ಆಗತೊಡಗಿ ಮುಖ್ಯತಃ ನಟರ ವೇಷ, ಭೂಷಣ, ನೃತ್ಯ ಮತ್ತು ಅಭಿನಯ, ಹಾಡುಗಾರಿಕೆಯಲ್ಲಿಯೂ ಅವುಗಳ ಪ್ರಭಾವ ಕಂಡುಬರುತ್ತಿದ್ದುದು ಎಲ್ಲರೂ ಅರಿತ ಮಾತಾಗಿದೆ. ಎಂದು ಯಕ್ಷಗಾನ ತನ್ನ ಮೂಲಸ್ವರೂಪ ಕಳೆದು ಕೊಳ್ಳುವುದಕ್ಕೆ ಕಾರಣವಾದ ಅನ್ಯ ಪ್ರಭಾವದ ಕುರಿತು ಗಮನ ಸೆಳೆಯುತ್ತಾರೆ. ತಾನು ಈ ಕೃತಿ ರಚನೆ ಮಾಡುವ ಕಾಲದಲ್ಲಿ ಹಲವು ಹಳೆಯ ರಾಗಗಳು, ಹೆಜ್ಜೆಗಳು ಮಾಯವಾಗಿವೆ ಎಂದು ಲೇಖಕರು ಹೇಳುತ್ತಾರೆ. ಆದರೆ ಅವೆಲ್ಲವನ್ನೂ ಇಲ್ಲಿ ದಾಖಲಿಸಿದ್ದಾಗಿಯೂ ಹೇಳಿದ್ದಾರೆ. ಈ ಕೃತಿ ರಚನೇ ಆದ ಎರಡು ವರ್ಷದ ನಂತರ ಅಂದರೆ 1957 ರಲ್ಲಿ ರಚಿಸಲ್ಪಟ್ಟ ‘ಯಕ್ಷಗಾನ ಬಯಲಾಟ’ ಕೃತಿಯಲ್ಲಿ ಕೋಟ ಶಿವರಾಮ ಕಾರಂತರು ಕೂಡ  ಯಕ್ಷಗಾನದ ಪಾಲಿಗೆ ಈಗ ಒಂದು ಸಂಧಿ ಕಾಲವೇ ಬಂದಂತಿದೆ. ಅದನ್ನು ಜನರು ಪ್ರೋತ್ಸಾಹಿಸದೇ ಬೀಳುಬಿಡುತ್ತಿದ್ದಾರೆ-ಎಂಬುದಕ್ಕಿಂತಲೂ ಹೆಚ್ಚಿನ ದು:ಖ ಆ ಕಲೆಯ ಆಳ, ಶಕ್ತಿಯನ್ನರಿಯದೆ ಅದಕ್ಕೆ ಅಪಚಾರ ಮಾಡುತ್ತಿದ್ದಾರಲ್ಲ ಎಂಬುದು. ಇದನ್ನು ತಡೆಯುವ ದಾರಿ ಯಾವುದು-ಎಂದು ನಾವು ಯೋಚಿಸಬೇಕಾದ ಕಾಲ ಬಂದಿದೆ. ನಾವಿನ್ಯತೆಯ ಮೋಹ ಈ ದೇಶೀಯ ಕಲೆಗೆ ಮೃತ್ಯುವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದನ್ನು ಕಾಣಬಹುದು( 1957;ಪುಟ:22-23, ಹರ್ಷ ಮುದ್ರಣ, ಪ್ರಕಟನಾಲಯ; ಪುತ್ತೂರು, ದ. ಕ). ಬಹುಶಃ ಈಗ ಇವುಗಳಲ್ಲಿ ಇನ್ನಷ್ಟು ಇತಿಹಾಸದ ಪುಟ ಸೇರಿರಬೇಕು. ಆದ್ದರಿಂದ ಕಾಲಕಾಲಕ್ಕೆ ನಡೆದ ಬದಲಾವಣೆಯ ಅಧ್ಯಯನಕ್ಕೆ ಸಂಶೋಧಕರಿಗೆ ಇದೊಂದು ಆಕರ ಗ್ರಂಥವಾಗಬಹುದು ಎನ್ನುವುದು ಪ್ರಕಾಶನದ ಆಶಯ.
ಪುಸ್ತಕದ ಮೊದಲ ಭಾಗದಲ್ಲಿ ಕಲೆಯ ಉಗಮ ಮತ್ತು ಸ್ವರೂಪದ ಚಚರ್ೆಗೆ – ನಾದೋತ್ಪತ್ತಿಯ ಲಕ್ಷಣ, ನಾದಲಕ್ಷಣದಿಂದ ಪ್ರಾರಂಭಿಸಿ ಸೂತ್ರಧಾರಿಯ ಲಕ್ಷಣದವರೆಗೆ- ಸಂಬಂಧಿಸಿದಂತೆ ಭರತನ ನಾಟ್ಯಶಾಸ್ತ್ರದ ಹಲವು ಶ್ಲೋಕಗಳನ್ನು ಅರ್ಥ ಸಹಿತವಾಗಿ ವಿವರಿಸಲಾಗಿದೆ. ಹೀಗೆ ಮಾಡುವಾಗೆಲ್ಲಾ ನಾಟ್ಯ, ತಾಳ, ನಾದ, ಭಾಷೆ ಇತ್ಯಾದಿಗಳನ್ನೆಲ್ಲಾ ದೈವದ ಕೊಡುಗೆಯಾಗಿಯೇ ನೋಡುವ ಸಾಂಪ್ರದಾಯಿಕ ನೋಟವಿದೆ.  ಕಲೆಯ ಉಗಮದ ಕುರಿತು ಭರತನ ‘ನಾಟ್ಯ ಶಾಸ್ತ್ರ’ದ ನಿಲುವುಗಳನ್ನು (ನಾಟ್ಯ ಶಾಸ್ತ್ರದ ಚಾರಿತ್ರಿ ಮಹತ್ವವನ್ನು ಒಪ್ಪಿಕೊಳ್ಳುತ್ತಲೇ) ಒಪ್ಪಲು ಸಾಧ್ಯವಿಲ್ಲ ಎನ್ನುವುದು ಬೇರೆ ಮಾತು. ಆದರೆ ಕೃಷ್ಣ ಭಂಡಾರಿಯವರು ಭರತನ ನಾಟ್ಯಶಾಸ್ತ್ರವನ್ನು ಉತ್ತರ ಕನ್ನಡಕ್ಕೆ ವಿಶಿಷ್ಟವಾದ ಯಕ್ಷಗಾನದೊಂದಿಗೆ ಅನುಸಂಧಾನ ಮಾಡುತ್ತಿರುವುದು ತೀರಾ ಮುಖ್ಯವಾದುದು. ಬಹುವಿಸ್ತಾರವಾದ ಭೂಮಿಕೆ ಉಳ್ಳ ಭರತನ ಸಿದ್ಧಾಂತವನ್ನು ಸ್ಥಳೀಯತೆಯೊಂದಿಗೆ ಇಟ್ಟು ನೋಡುವ ಆ ಮೂಲಕ ಯಕ್ಷಗಾನಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ರೂಪಿಸಲು ಅವರು ನಡೆಸಿದ ಪ್ರಯತ್ನವನ್ನು ಇಲ್ಲಿ ಚಾರಿತ್ರಿಕವಾಗಿ ಗಮನಿಸಬಹುದು. ದಕ್ಷಿಣೋತ್ತರ ಜಿಲ್ಲೆಯಲ್ಲಿ ಮಾತ್ರ ಪ್ರಚಲಿತವಿದ್ದ ಈ ಕಲೆಯನ್ನು ಅವರು ಕನ್ನಡದ ಕಲೆಯೆಂದೇ ಒತ್ತು ಕೊಡುತ್ತಿರುವುದನ್ನ್ನೂ ಗಮನಿಸಬಹುದು.
ಶೈಕ್ಷಣಿಕ ಮಹತ್ವ :
 ಯಕ್ಷಗಾನದ ಭಾಗವತಿಕೆ, ಕುಣಿತ ಮತ್ತು ಮದ್ದಲೆಯನ್ನು ಕಲಿಯುವ ಆಸಕ್ತಿರಿಗೆ ಇದೊಂದು ಮಹತ್ವದ ಶೈಕ್ಷಣಿಕ ಕೃತಿ ಕೂಡ. ಸಂಪ್ರದಾಯ ಬದ್ಧವಾಗಿ ಒಂದು ಕಲೆಯನ್ನು ಕಲಿಸುವ ಪಠ್ಯಗಳು ನಮ್ಮಲ್ಲಿ ತೀರಾ ಅಪರೂಪ. ಈ ನಿಟ್ಟಿನನಲ್ಲಿ ಐವತ್ತರ ದಶಕದಲ್ಲಿಯೇ ಭಂಡಾರಿಯವರಿಂದ ಈ ಶ್ಲಾಘನೀಯ ಕೆಲಸ ನಡೆಯಿತು. ರಾಗದ ಆರೋಹಣ, ಅವರೋಹಣಗಳನ್ನು, ಮೃದಂಗದ ಬಿಡ್ತಿಗೆಯನ್ನು ಬಹುಶಃ ಮೌಖಿಕವಾಗಿ ಅಥವಾ ಪ್ರಾಯೋಗಿಕವಾಗಿ ಹೇಳುವುದು ಸುಲಭವಾಗಬಹುದು. ಆದರೆ ಬರವಣಿಗೆಗೆ ಇಳಿಸುವುದು ತೀರಾ ಕಷ್ಟ ಸಾಧ್ಯವಾದದ್ದು. ಯಾವುದೇ ಸಾಂಪ್ರದಾಯಿಕ ಶಿಕ್ಷಣ ಪದವಿ ಹೊಂದಿರದ ಕೃಷ್ಣ ಭಂಡಾರಿಯವರು ಒಂದು ಶಾಸ್ತ್ರ ಗ್ರಂಥವನ್ನು ಎಲ್ಲೂ ಸಂಶಯಕ್ಕೆ ಎಡೆಯಿಲ್ಲದಂತೆ ಇಲ್ಲಿ ನಿರೂಪಿಸಿದ್ದು ಮೆಚ್ಚುವಂತದ್ದು. ಇಷ್ಟೊಂದು ಸರಳವಾಗಿ ಮತ್ತು ಸಮಗ್ರವಾಗಿ ವಿವರಿಸುವ ಇಂಥದ್ದೊಂದು ಕೃತಿ ಈವರೆಗೂ ಇರಲಾರದು. ರಾಗ-ತಾಳಗಳ ಸ್ಪಷ್ಟತೆ, ಖಚಿತತೆ ಮತ್ತು ಈ ಕ್ಷೇತ್ರದಲ್ಲಿರುವ ಪ್ರಾಯೋಗಿಕ ಅನುಭವದಿಂದಾಗಿ ಇದು ಒಂದು ‘ಮಾದರಿ ಬರವಣಿಗೆ’ ಕೂಡ. ಹಾಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಯಕ್ಷಗಾನ ಶಾಲೆಗಳಿಗೆ ಈ ಕೃತಿ ಶೈಕ್ಷಣಿಕ ಪಠ್ಯವಾಗಿ ವರದಾನವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಗೃಂಥಕರ್ತರ ಪರಿಚಯ : 
ಕೃಷ್ಣ ತಾಯಿಲಕ್ಷ್ಮೀ ಭಂಡಾರಿಯವರು ಶಿರಸಿ ತಾಲೂಕಿನ ಸೋಂದಾ ಗ್ರಾಮದವರು. ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ಸುಮಾರು 12 ಕಿ.ಮಿ. ದೂರದಲ್ಲಿದೆ ಇವರ ಮನೆ. ತೀರಾ ಬಡ ಕುಟುಂಬದಿಂದಲೂ ಹಿಂದುಳಿದ ಸಮುದಾಯದಿಂದಲೂ ಬಂದಿರುವ ಇವರು ಸೋಂದಾದ ಮಠದಲ್ಲಿ ‘ಕರ್ನೆ’ ಭಾರಿಸುತ್ತಿದ್ದರು. ದೇವರ ಹೆಸರಿನಲ್ಲಿ ಅವರು ನೀಡುವ ಅಕ್ಕಿಗಾಗಿಯೋ ಊಟಕ್ಕಾಗಿಯೋ ವಾದ್ಯ ಮಾಡುವ ಬಿಟ್ಟಿ ಕಾಯಕ ಇವರದು. ಒಳ್ಳೆಯ ಪಂಚವಾದ್ಯ ಕಲಾವಿದರಾಗಿ (ಅದರಲ್ಲಿ ‘ಮೋವ್ರಿ’ ವಾದಕರಾಗಿ) ಆ ಕಾಲದಲ್ಲಿ ಹೆಸರು ಮಾಡಿದವರು. ಚಿಕ್ಕಂದಿನಿಂದಲೂ ತಾಯಿಯ ಆರೈಕೆಯಲ್ಲಿಯೇ ಬೆಳೆದ ಇವರು ಮಠದ ಗೇಣಿದಾರರಾಗಿ ಅಲ್ಲಿಯೇ ಊಳಿಗಮಾಡಿಕೊಂಡು ಬಡತನದಲ್ಲಿಯೇ ಬೆಳೆದರು. ಪಾರಂಪರಿಕವಾಗಿ ಬಂದ ಪಂಚವಾದ್ಯ ಕಲಾವಿದರಾದ್ದರಿಂದ ಸಹಜವಾಗಿಯೇ ಇವರಿಗೆ ರಾಗ ಮತ್ತು ತಾಳದ ಖಚಿತ ಜ್ಞಾನ ಅವರಿಗೆ ಇತ್ತು. ಇದರೊಂದಿಗೆ ಬಾಲ್ಯದಿಂದಲೇ ಸುತ್ತ ನಡೆಯುತ್ತಿರುವ ಆಟ, ತಾಳಮದ್ದಲೆಯನ್ನು ನೋಡುತ್ತಿದ್ದ ಇವರು ಸಾವಕಾಶ ಅದರ ಕಡೆಗೇ ಒಲಿದರು.
krishna bhandari, sonda
ಎತ್ತರದ ನಿಲುವು, ತಲೆಗೊಂದು ಕಪ್ಪು ಟೊಪ್ಪಿ, ಬಿಳಿ ಪಂಜೆ, ಮೇಲೆ ಒಂದು ಜುಬ್ಬಾ ಹಾಕಿಕೊಂಡು ಬದುಕಿನ ತುಂಬಾ ಯಕ್ಷಗಾನಕ್ಕಾಗಿಯೇ ನಡೆದರು. ಮದ್ದಲೆ ವಾದಕರಾಗಿ ಭಾಗವತರಾಗಿ, ವೇಷಧಾರಿಯಾಗಿ ಮತ್ತು ತಾಳಮದ್ದಲೆಯ ಅರ್ಥಧಾರಿಯಾಗಿಯೂ ಅವರು ಆ ಕಾಲದಲ್ಲಿ ಹೆಸರು ಮಾಡಿದ್ದರು. ಇವೆಲ್ಲದರಲ್ಲಿಯೂ ಅವರಿಗೆ ಅಪಾರವಾದ ಗತಿ ಇರುವುದರಿಂದ ಯಕ್ಷಗಾನದ ಮಾಸ್ತರರಾಗಿಯೂ ಯಶಸ್ವಿಯಾದರು. ಸುತ್ತಮುತ್ತಲಿನ ಊರುಗಳಿಗೆ ಹೋಗಿ ಹದಿನೈದು-ಇಪ್ಪತ್ತು ದಿವಸ ಅಲ್ಲೇ ಉಳಿದು ಸ್ಥಳೀಯ ಕಲಾವಿದರಿಗೆ ಯಕ್ಷಗಾನವನ್ನು ಕಲಿಸಿ ಬರುತ್ತಿದ್ದರು. ಅಲ್ಲಿ ಅವರಿಗೆ ಸಂಭಾವನೆ ಸಿಗುತ್ತದೆಂಬ ಯಾವ ಭರವಸೆಯೂ ಇಲ್ಲ. ಆಹೊತ್ತಿನ ಊಟಕ್ಕೆ-ಚಹಾಕ್ಕೇನೂ ಕೊರತೆ ಇರಲಿಲ್ಲ. ಮನೆಯಲ್ಲಿ ಹೆಂಡತಿ ಲಲಿತಾ ಮತ್ತು ಮಹಾಬಲೇಶ್ವರ, ದೇವರು ಎನ್ನುವ ಎರಡು ಮಕ್ಕಳು. ಹೇಗೋ ಸಂಸಾರ ನಡೆಯುತ್ತಿತ್ತು. ಈಗಲೂ ಅವರ ಮೂಲ ಮನೆ ಸೋಂದಾ ಮಠದ ಪಕ್ಕದಲ್ಲಿಯೇ ಇದೆ. ಅದರಲ್ಲಿ ಈಗ ಅವರ ಮೊಮ್ಮಗ ಶಹನಾಯಿ ವಾದಕ ದತ್ತಾತ್ರೆಯ ಭಂಡಾರಿ ವಾಸವಾಗಿದ್ದಾರೆ.
ಆ ಕಾಲದಲ್ಲಿ ತ್ಯಾಗಲಿ, ಸೋಂದಾ, ಶಿರಸಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ ಉಲ್ಲೇಖ ಮಾಡುತ್ತಾರೆ. ಅಲ್ಲಿ ನಡೆದ ಗಂಭೀರ ಚಚರ್ೆಯೇ ಅವರಿಗೆ  ಈ ಕೃತಿ ಬರೆಯಲು ಹುಮ್ಮಸ್ಸು ನೀಡಿತು. ಯಕ್ಷಗಾನ ರಂಗದಲ್ಲಿ ಆಗುತ್ತಿರುವ ಅನುಚಿತ ಬೆಳವಣಿಗೆಯನ್ನು ಸ್ವಲ್ಪಮಟ್ಟಿಗಾದರೂ ತಡೆಹಿಡಿಯುವ ಮಾರ್ಗವಾಗಿ ಇರುವ ಸೋಗೆಮನೆಯಲ್ಲಿಯೇ  ಯಕ್ಷಗಾನ ಶಾಲೆಯನ್ನು ತೆರೆದರು. ಕೃಷ್ಣ ಭಂಡಾರಿಯವರ ಯಕ್ಷಶಾಲೆಯಲ್ಲಿ 15 ರಿಂದ 25 ಜನರ ವರೆಗೂ ವಿದ್ಯಾಥರ್ಿಗಳಿದ್ದರೆಂದು ಅವರ ಆಪ್ತರು ಹೇಳುತ್ತಾರೆ. ಎಲ್ಲಾ ಜಾತಿ, ಪಂಗಡಗಳ ಆಸಕ್ತರಿಗೆ ಈ ಶಾಲೆ ತೆರೆದುಕೊಂಡಿತ್ತು. ಅವಶ್ಯವಿದ್ದಲ್ಲಿ ವಿದ್ಯಾಥರ್ಿಗಳಿಗೆ ಊಟ-ತಿಂಡಿಯ ವ್ಯವಸ್ಥೆಯನ್ನೂ ಮಾಡಿದ ಕುರಿತು ಹೇಳಲಾಗುತ್ತದೆ. ಯಕ್ಷಗಾನ ಪ್ರದರ್ಶನಕ್ಕೆ ಅಗತ್ಯವಿದ್ದ ಕುಣಿತ, ಭಾಗವತಿಕೆ, ಮೃದಂಗ, ಚಂಡೆ (ಕೆಲವು ಬಾರಿ ಚಂಡೆಯ ಬದಲು ತಾಸ್ಮೋರನ್ನು ಬಳಸುತ್ತಿದ್ದರು.) ಮುಂತಾದ ಎಲ್ಲಾ ವಿಭಾಗದಲ್ಲಿಯೂ  ಶಾಸ್ತ್ರೀಯವಾಗಿ ಕಲಿಸಲಾಗುತ್ತಿತ್ತು. ಯಕ್ಷಗಾನ ವಿದ್ವಾಂಸರ ನಡುವೆ ಗೌರವಾನ್ವಿತ ಸ್ಥಾನ ಪಡೆದ ಸೋಂದಾ ಕೃಷ್ಣ ಭಂಡಾರಿಯವರು ಸ್ವತ: ಬಡತನದ ಬೇಗೆಯಲ್ಲಿ ಬೆಂದರೂ ತಾವು ಕಲಿತದ್ದನ್ನು, ಕಲಿಸಿದ್ದನ್ನು ಈ ಪುಸ್ತಕದಲ್ಲಿ ದಾಖಲಿಸುವ ಮೂಲಕ ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ನನ್ನ ತಂದೆ (ಆರ್. ವಿ. ಭಂಡಾರಿ) ಈ ಪುಸ್ತಕದ ಕುರಿತು ಮೊದಲು ನನ್ನ ಗಮನ ಸೆಳೆದವರು. ‘ಯಕ್ಷಗಾನ ಬಯಲಾಟ’ ಪುಸ್ತಕ ಬರೆದ ಶಿವರಾಮ ಕಾರಂತರೂ ಕೃಷ್ಣ ಭಂಡಾರಿಯವರನ್ನು ಉಲ್ಲೇಖಿಸಿದ್ದನ್ನು ನೆನಪಿಸಿಕೊಂಡಿದ್ದ ಅವರು(ಕಾರಂತರ ಬರಹದಲ್ಲೋ ಅಥವಾ ಭಾಷಣದಲ್ಲೋ ಗೊತ್ತಿಲ್ಲ.)ಇಂತಹ ಮಹತ್ವದ ಪುಸ್ತಕವನ್ನು ಮರುಮುದ್ರಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಈಗ ಅವರ ನೆನಪಿನ ಪುಸ್ತಕ ಮಾಲೆಯಾಗಿ ಪ್ರಕಟಿಸುತ್ತಿದ್ದೇವೆ.
ಈ ಕೃತಿಯನ್ನು ಸಂಪಾದಿಸುವಾಗ ಮೂಲದಲ್ಲಿ ಬಳಸಲಾದ ಕೆಲವು ಶಬ್ದಗಳು ಮತ್ತು ವಾಕ್ಯಗಳ ರಚನೆ ಈಗಿಲ್ಲದಿದ್ದರೂ ಅದನ್ನು ಬದಲಾಯಿಸದೇ ಹಾಗೇ ಇಟ್ಟುಕೊಳ್ಳಲಾಗಿದೆ. ಯಾಕೆಂದರೆ ಇದು ಆಕಾಲದ ಭಾಷಾ ಬಳಕೆಯ ಬಗ್ಗೆ ಕೂಡ ಮಹತ್ವದ ದಾಖಲೆಯಾಗಬಹುದು ಎನ್ನುವ ಕಾರಣದಿಂದ.
ಈ ಪುಸ್ತಕದಲ್ಲಿ ಪ್ರಸ್ತಾಪಿತವಾದ ಹಲವು ಸಂಗತಿಯು ನನಗೆ ಹೊಸತಾಗಿದ್ದರಿಂದ  ನಾನು ಯಕ್ಷಗಾನದ ವಿದ್ವಾಂಸರೂ ಪ್ರಸಂಗಕರ್ತರೂ ಆದ ಪ್ರೋ. ಎಂ.ಎ.ಹೆಗಡೆಯವರ ಸಹಾಯ ಕೋರಿದೆ. ಪುಸ್ತಕ ಪ್ರಕಟಿಸುವ ಯೋಜನೆ ಮುಂದಿಟ್ಟಾಗ ಅವರು ಸಂತೋಷದಿಂದಲೇ ಅನುಮೋದಿಸಿದರು ಮಾತ್ರವಲ್ಲ ಎರಡೆರಡು ಬಾರಿ ಪುಸ್ತಕದ ಪ್ರೂಫ್ ತಿದ್ದಿಕೊಟ್ಟರು. ಉಪಯುಕ್ತವಾದ ಒಂದು ಮುನ್ನುಡಿಯನ್ನೂ ಬರೆದುಕೊಟ್ಟು ಪ್ರೋತ್ಸಾಹಿಸಿದರು. ಅವರಿಗೆ ಪ್ರಕಾಶನವು ಕೃತಜ್ಞವಾಗಿದೆ.
ಈ ಪುಸ್ತಕ ತರುವಲ್ಲಿ ಕೃಷ್ಣ ಭಂಡಾರಿಯವರ ಮೊಮ್ಮಗ ದತ್ತಾತ್ರೆಯ ಭಂಡಾರಿಯವರ ನೆರವನ್ನು ನೆನೆಯಲೆ ಬೇಕು. ನನಗೆ ಸಿಕ್ಕಿರುವ ‘ಯಕ್ಷಗಾನ ಕೈಪಿಡಿ’ ಪುಸ್ತಕಗಳಿಗೆಲ್ಲಾ ಒಂದೋ ಹಿಂಬದಿಯ ಪುಟಗಳಿರಲಿಲ್ಲ ಅಥವಾ ಮುಂಬದಿಯ ಪುಟಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ದತ್ತಾತ್ರೆಯ ಅವರು ಅಜ್ಜನ ಕುರಿತ ಹೆಮ್ಮೆಯಿಂದ ಪೂರ್ಣರೂಪದ ಪುಸ್ತಕ ಒದಗಿಸಿದರು; ಫೋಟೋ ಒದಗಿಸಿದರು; ಪ್ರೀತಿಯಿಂದ ಅಜ್ಜನ ಕುರಿತು ಅಗತ್ಯವಾದ ಮಾಹಿತಿ ಒದಗಿಸಿದರು. ದತ್ತಾತ್ರೇಯ ಭಂಡಾರಿ ಕೂಡ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮ ನೀಡಿದ ಒಳ್ಳೆಯ ಶಹನಾಯಿ ವಾದಕರು. ದೂರದ ಕಾಶಿಗೆ ಹೋಗಿ ಶಹನಾಯಿಯ ದಂತಕತೆ ಬಿಸ್ಮಿಲ್ಲಾಖಾನರೊಂದಿಗೆ ಇದ್ದು ಶಹನಾಯಿ ನುಡಿಸುವ ಸೂಕ್ಷ್ಮವನ್ನು ಕಲಿತು ಬಂದವರು. ಅವರು ಮತ್ತು ಅವರ ಮಡದಿ ಪ್ರಫುಲ್ಲಾ ಅವರ ಸಹಾಯಕ್ಕೆ ಕೃತಜ್ಞತೆಗಳು.
ಇದನ್ನು ಪ್ರಕಟಿಸಲು ಅಗತ್ಯವಾದ ಆಥರ್ಿಕ ನೆರವನ್ನೂ ನೀಡಿದ ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ), ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ, ಯಕ್ಷಕಿರೀಟ ಕೆರೆಕೋಣ, ಮುಂತಾದ ಸಂಸ್ಥೆಗಳ ಗೆಳೆಯರಿಗೆ ಅನಂತ ಕೃತಜ್ಞತೆಗಳು.
ಈ ಹಿಂದೆ ಮೊಳೆ ಜೋಡಿಸಿ ಮುದ್ರಿಸಿದ ಕೆಲಸವನ್ನು ಈಗ ಕಂಪ್ಯೂಟರನಲ್ಲಿ ಮಾಡುವುದು ಸಾಹಸದ ಕೆಲಸ. ಇದನ್ನು ತಾಳ್ಮೆಯಿಂದ ಮಾಡಿದ ಮತ್ತು ಸುಂದರವಾಗಿ ಮುಖಪುಟ ವಿನ್ಯಾಸ ಮಾಡಿದ ರಾಮು.ಎಂ ಅವರಿಗೆ,
ಮುಖಪುಟದ ರೇಖಾಚಿತ್ರ ಬಿಡಿಸಿಕೊಟ್ಟ ಗೆಳೆಯ ಸತೀಶ ಯಲ್ಲಾಪುರ ಅವರಿಗೆ,
ಸುಂದರವಾಗಿ ಮುದ್ರಿಸಿಕೊಟ್ಟ ಚಂದ್ರು ಮತ್ತು ಉಳಿದ ಸಿಬ್ಬಂದಿಗಳಿಗೆ,
ಓದುಗರಾದ ತಮಗೆ
ಅನಂತ ಕೃತಜ್ಞತೆಗಳು.
– ಡಾ. ವಿಠ್ಠಲ ಭಂಡಾರಿ, ಕೆರೆಕೋಣ
  ಸಂಪಾದಕ

ಸುಬ್ರಾಯ ಮತ್ತಿಹಳ್ಳಿ ನಾಗೇಶ ಹೆಗಡೆ ಬರಹದ ಕುರಿತು

ಸಾಮಾನ್ಯ

ಸುಬ್ರಾಯ ಮತ್ತಿಹಳ್ಳಿ ನಾಗೇಶ ಹೆಗಡೆ ಬರಹದ ಕುರಿತು subraya mattihalli 1
http://youtu.be/Y3LSpGrDpcs

ಯಮುನಾ ಗಾಂವ್ಕರ್ : ಕವಿತೆ – ‘ಹಿಬಾಕುಶಾ’

ಸಾಮಾನ್ಯ
Return to editing

ಯಮುನಾ ಗಾಂವ್ಕರ್ : ಕವಿತೆ – ‘ಹಿಬಾಕುಶಾ’ HEBAKUSHA’ (A poem about atom bomb victims of Hiroshima-)Yamuna
Your video has been published at http://youtu.be/q7ntg29Fj4s

ಮಾಧವಿ ಭಂಡಾರಿ ಕೆರೆಕೋಣ: ಕವಿತೆ ಓದು- “ಹೊದ್ಲು ಅರಳುವ ಪರಿ”

ಸಾಮಾನ್ಯ
Return to editing

ಮಾಧವಿ ಭಂಡಾರಿ ಕೆರೆಕೋಣ: ಕವಿತೆ ಓದು- “ಹೊದ್ಲು ಅರಳುವ ಪರಿ” -madhavi Bhandari Kerekon
Your video has been published at http://youtu.be/pcMkbcZy8Yk